ಸರಣಿ ಹತ್ಯೆಗಳು: ಕರಾವಳಿಯ ನಡಿಗೆ ಯಾವ ದಿಕ್ಕಿಗೆ?
ಸರಣಿ ಹತ್ಯೆಗಳು: ಕರಾವಳಿಯ ನಡಿಗೆ ಯಾವ ದಿಕ್ಕಿಗೆ?
       ಕರಾವಳಿಯ ಕೋಮು ಸಂಘರ್ಷಕ್ಕೆ ಕಡಿವಾಣ ಬೀಳಲಿ
ಮತ್ತೆ ಮತ್ತೆ ಅಮಾಯಕರು ಕೊಲೆಯಾಗುತ್ತಿದ್ದಾರೆ.ಕರಾವಳಿಯಲ್ಲಿ ಈ ಅಮಾಯಕನ ಕೊಲೆಗೆ
ಕಾರಣಕರ್ತರು ಯಾರು? ಅಲ್ಪಸಂಖ್ಯಾತ ಕಾಂಗ್ರೆಸ್ ನಾಯಕರಿಂದ ರಾಜಿನಾಮೆ ಇದಕ್ಕೆ
ಪರಿಹಾರವೇ.. ಜಿಲ್ಲಾ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಇದಕ್ಕೆ ಪರಿಹಾರವೇ ಇಂತಹ ಪ್ರಶ್ನೆಗಳು ತಲೆಯಲ್ಲಿ ಗುಂಯ್ ಗುಡುತ್ತಿದೆ.
ಇತ್ತೀಚಿಗಷ್ಟೇ ಮಂಗಳೂರಿನ ಕುಡುಪಿನಲ್ಲಿ ಗುಂಪುಥಳಿತದಿಂದ ಅಶ್ರಫ್ ಎನ್ನುವ ಕೇರಳ ಮೂಲದ ವಲಸೆ 
ಕಾರ್ಮಿಕನೊಬ್ಬನನ್ನು ಆತನ ಧರ್ಮ,ಭಾಷೆಯ ಕಾರಣಕ್ಕಾಗಿ 30 ಜನರ ಗುಂಪೊಂದು ಸೇರಿ
ಕೊಂದರು.ಪೋಲಿಸರಾಗಲೀ ಅಧಿಕಾರಿಗಳಾಗಲೀ ಈ ಗುಂಪು ಹತ್ಯೆಯಲ್ಲಿ ಭಾಗಿಯಾದ
ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಇನ್ನೂ ಮೀನಮೇಷ
ಎಣಿಸುತ್ತಿದ್ದಾರೆ.ಅಷ್ಟರಲ್ಲೇ,ಯಾವುದೇ ಕ್ರಿಮಿನಲ್ ಮೊಕದ್ದಮೆಗಳಿಲ್ಲದೆ ತನ್ನ ಜೀವನವನ್ನು
ಸಾಗಿಸಲು ಟೆಂಪೋದಲ್ಲಿ ದುಡಿದು ಕುಟುಂಬ ನಡೆಸುತ್ತಿದ್ದ ಕೊಳತ್ತಮಜಲಿನ ಅಬ್ದುಲ್ ರಹ್ಮಾನ್ ಎಂಬ
ಅಮಾಯಕ ಸೋದರನನ್ನು ದುಷ್ಟರ್ಮಿಗಳು ಬರ್ಬರವಾಗಿ ಕೊಂದು ಹಾಕಿದ್ದಾರೆ.ಯಾವುದೇ
ರಾಜಕೀಯ ಸಂಘಟನೆಗಳೊಂದಿಗೆ ಸಂಭಂದವಿಲ್ಲದ ಅಬ್ದುಲ್ ರಹ್ಮಾನ್ ಅವರನ್ನ
ಯಾತಕ್ಕೆ ಕೊಲೆ ನಡೆಸಬೇಕು? ಒಂದು ಹಿಂದೂ ಸಂಘಟನೆ "ಬಜಪೆ ಚಲೋ" ರೀತಿಯ
ಸಮಾವೇಶಗಳು ಇದಕ್ಕೆ ಪ್ರಚೋದನವಾಯಿತೇ....  ಯಾರ ಅನುಮತಿ ಪಡೆದು ಇಂತಹ ಕಾರ್ಯಕ್ರಮಗಳನ್ನು ಮಾಡಿದರು? ಹಿಂದೂ ಮುಖಂಡರಾದ ಶ್ರೀಕಾಂತ್ ಶೆಟ್ಟಿ, ಭರತ್ ಕುಮ್ಡೇಲು,ಶರಣ್ ಪಂಪ್ವೆಲ್ ರವರ ಪ್ರಚೋದನಕಾರಿ ಭಾಷಣಗಳು,ಹೇಳಿಕೆಗಳು ಅವರು ಮಾಡಿದ ಸ್ವಯಂಪ್ರೇರಿತ ಬಂದ್ ಗಳ ಬಗ್ಗೆ ಏಕೆ ಮಾತಾಡಲ್ಲ?ಏಕೆ ಕೇಸ್ ಧಾಕಲಿಸಲ್ಲ? ಪೊಲೀಸರು, ಅಧಿಕಾರಿಗಳು ಹಾಗೂ ಸರ್ಕಾರ ಇಂತಹ ದುಷ್ಕರ್ಮಿಗಳ ಮೇಲೆ ಕಾನೂನುಬದ್ಧವಾಗಿ ಕ್ರಮ ಜರುಗಿಸಲು ಯಾಕೆ ಮುಂದಾಗುವುದಿಲ್ಲ? ನಿಷ್ಕ್ರಿಯರಾದ ಜಿಲ್ಲಾ ಉಸ್ತುವಾರಿ ಸಚಿವರನ್ನು,ಗೃಹ ಸಚಿವರನ್ನು ವಜಾಗೊಳಿಸಿ ಪ್ರಜ್ಞಾವಂತರನ್ನು ನೇಮಿಸಲು ಸರ್ಕಾರ ಮುಂದಾಗದಿದ್ದರೆ ಕರಾವಳಿಯ ಈಗಿನ ಅಂಧಕಾರ ಮುಂದುವರಿಯಲಿದೆ. ಒಂದು ಕಾಲದಲ್ಲಿ ಭಟ್ಕಳ ಎಂಬುವುದು ಕೋಮು ಪಡೆಗಳ ಬೀಡಾಗಿತ್ತು ,1996 ರಲ್ಲಿ ಪ್ರಚೋದನ ಭಾಷಣೆಗಳು ಮಾಡುತ್ತಿದ್ದ ಭಟ್ಕಳ ಶಾಸಕ ಡಾ.ಚಿತ್ತರಂಜನ್ ರವರ ಕೊಲೆ ತೀವ್ರ ಸ್ವರೂಪ ಪಡೆಯಿತು. ನಂತರ ಅಲ್ಲಿ ಕೋಮು ಸಂಘರ್ಷಕ್ಕೆ ಕಡಿವಾಣ ಬಿತ್ತು ."ಕೋಮು ನಿಗ್ರಹ ಪಡೆ" ಎಂಬ ಗೃಹ
ಸಚಿವರ ಭರವಸೆಯನ್ನು ಈಡೇರಿಸಲು ಸಾದ್ಯವಾಗಲಿಲ್ಲ ಎಂಬುವುದು ವಿಪರ್ಯಾಸ.ಒಂದೆಡೆ
ವಿದ್ಯಾಭ್ಯಾಸ, ಶೈಕ್ಷಣಿಕ ವಿಷಯಗಳಲ್ಲಿ ನೆತ್ತಿ ಹೆತ್ತಿ ನಿಂತಿರುವ ದಕ್ಷಿಣ ಕನ್ನಡವು ಕೋಮು
ಗಲಭೆ ರೌಡಿಶೀಟರ್ಗಳ ಕೊಲೆಗೆ ಯಾವುದೇ ಅಂತ್ಯವಿಲ್ಲ. ಕರಾವಳಿಯ ಈ ನಿರಂತರ ಕೊಲೆಗೆ
ಪರಿಹಾರವೇನೆಂದರೆ ಪ್ರಚೋದನೆ ಕಾರಿಯಾದಂತಹ ಭಾಷನಗಳನ್ನು ಬೀಗುವವರ ಬಾಯಿಗೆ
ಮೊದಲು ಬೀಗ ಜಡಿಯಬೇಕು.ಸರ್ಕಾರ ಇವರನ್ನು ಮೊದಲು ಬಂಧಿಸಬೇಕು.ಕೋಮು
ದೃಡೀಕರಣ,ಜಾತಿಯೆಡೆಯಲ್ಲಿ ಕಲಂಕ ಸೃಷ್ಟಿಸುವವರನ್ನು ನಿರ್ಮೂಲನೆ
ಮಾಡಬೇಕು.ಅಪರಾಧಿ ಚಟುವಟಿಕೆಯಲ್ಲಿ ಬಾಗಿಯಾಗುವವರು,ರೌಡಿಶೀಟರ್ಗಳನ್ನು ಬಂಧಿಸಿ ಕರಾವಳಿಯ ನೆಮ್ಮದಿ ಮರಳಿ ಬರಲು ಪ್ರಾರ್ಥಿಸೋಣ.
ರಾಝಿ ಕೊಡಾಜೆ 
ವಿಧ್ಯಾರ್ಥಿ: ನೂರುಲ್ ಹುದಾ ಇಸ್ಲಾಮಿಕ್ ಅಕಾಡಮಿ ಮಾಡನ್ನೂರ

Related Posts

Leave A Comment

Voting Poll

Get Newsletter