ತ್ವಲ್ಹತ್ ಬಿನ್ ಉಬೈದಿಲ್ಲಾ
ತ್ವಲ್ಹತ್ ಬಿನ್ ಉಬೈದಿಲ್ಲಾ

ಮಹಾನರಾದ ತ್ವಲ್ಹತುಬ್ನು ಉಬೈದಿಲ್ಲಾ ತಮೀಮೀ ಕುರೈಶೀ ಗೋತ್ರದ ವ್ಯಾಪಾರಕ್ಕಾಗಿ ಶಾಮ್ ಗೆ ಹೋದರು. ಸಂಘವು ಬುಸರ ಎಂಬ ಪಟ್ಟಣ ತಲುಪಿದಾಗ ಹಲವಾರು ಹಿರಿಯರು ಸಂತೆಗೆ ಹೋಗಿ ವ್ಯಾಪಾರ ಮಾಡಲು ಪ್ರಾರಂಭಿಸಿದರು. ತ್ವಲ್ಹತುಬ್ನು ಉಬೈದಿಲ್ಲಾ ರವರು ಚಿಕ್ಕ ವಯಸ್ಸಿನ ಹುಡುಗನಾಗಿದ್ದರು. ಇತರ ಜನರಿಗಿಂತ ಇವರಿಗೆ ವ್ಯಾಪಾರದ ಅನುಭವವಿರಲಿಲ್ಲ. ಆದರೂ ಕೂಡ ಒಳ್ಳೆಯ ಬುದ್ಧಿವಂತಿಕೆ ಹಾಗೂ ಒಳನೋಟ ಇರುವುದರಿಂದಲೇ ಹರಾಜು ಕರೆಯುವುದರಲ್ಲಿ ಇವರನ್ನು ಮಣಿಸಲು ಎಲ್ಲರಿಗೂ ಅಸಾಧ್ಯ. ಬೆಳಿಗ್ಗೆ ಮತ್ತು ಸಂಜೆಯ ವೇಳೆ ಜನರೆಲ್ಲರೂ ಮಾರಾಟ ಮಾಡಲು ಬರುವಾಗ ಅವರೆಲ್ಲರಿಗೂ ವಿಪರೀತ, ಶಿಸ್ತು ಶೈಲಿಯಲ್ಲಿ ವ್ಯಾಪಾರ ಮಾಡುವುದರಿಂದ ಜನರ ಮನ ಗೆದ್ದರು.

                 ***********

ತ್ವಲ್ಹತುಬ್ನು ಉಬೈದಿಲ್ಲಾ (ರ.ಅ) ರವರು ಹೇಳುತ್ತಾರೆ:

ನಾನು ಬುಸರದಲ್ಲಿದ್ದೆ. ಆಗ ಒಬ್ಬ ಖುಷಿಯಿಂದ ಹೇಳುತ್ತಿದ್ದ." ಓ ವ್ಯಾಪಾರಿಗಳೇ ನಿಮ್ಮಲ್ಲಿ ಯಾರಾದರೂ ಹಜ್ಜ್ ಮಾಡಲು ಇಚ್ಚಿಸುತ್ತೀರಾ ? ಆಗ ನಾನು ಅವರ ಬಳಿ ಹೋಗಿ ಹೇಳಿದೆ ಹೌದು ನಾನು ಹಜ್ಜ್ ಹೋಗಲು ಇಚ್ಛಿಸಿದ್ದೇನೆ ಅವರು ಹೇಳಿದರು ಅಹ್ಮದ್ ಎಂಬವರನ್ನು ನಿಮಗೆ ಗೊತ್ತಾ? ನಾನು ಕೇಳಿದೆ: ಆಹ್ಮದ್ ಯಾರು? ಅವರು ಹೇಳಿದರು :ಅಹಮದ್ ಬಿನ್ ಅಬ್ದುಲ್ಲಾಬಿನ್ ಅಬ್ದುಲ್ ಮುತ್ತಲಿಬ್. ಈ ತಿಂಗಳಾಗಿದೆ ಅವರು ಕಾಣುವುದು. ಇವರು ಕೊನೆಯ ಪ್ರವಾದಿಯವರಾಗಿದ್ದಾರೆ,ಇವರು ನಮ್ಮೂರಿಗೆ ಬಂದಿದ್ದಾರೆ. ಮತ್ತೆ ಹೇಳಿದರು "ಓ ಯುವಕ ನಿನಗೆ ಅವರನ್ನು ನೋಡುವುದು ಕಡ್ಡಾಯವಾಗಿದೆ". ನಂತರ ಅವರು ಅಪ್ರತ್ಯಕ್ಷರಾದರು.

ಇದು ಕೇಳಿದ ನಂತರ ಇವರಿಗೆ ಈ ಒಂದು ಮಾತು ಹೃದಯದಲ್ಲಿ ಅಚ್ಚೊತ್ತಿಕೊಂಡಿತು. ಮತ್ತೆ ನಾನು ಯಾತ್ರೆ ಹೋಗಲು ತೀರ್ಮಾನಿಸಿದೆ. ನಾನು ನನ್ನ ಸಂಘವನ್ನು ಊರಿಗೆ ಮರಳಿಸಿ, ನಾನು ಮಕ್ಕಾದ ಕಡೆಗೆ ಮುಖ ಮಾಡಿದೆ. ನಾನು ಮಕ್ಕ ತಲುಪಿದಾಗ ಅಲ್ಲಿನ ಜನರೊಂದಿಗೆ ಕೇಳಿದೆ ಇಲ್ಲೇನಾದರೂ ಘಟನೆ ನಡೆದಿದೆಯಾ? ಜನರೆಲ್ಲರೂ ಹೇಳಿದರು. ಅದೇ ಮೊಹಮ್ಮದ್ ಬಿನ್ ಅಬ್ದುಲ್ಲಾ ಎಂಬವರು ಪ್ರವಾದಿತ್ವವನ್ನು ವಾದಿಸುತ್ತಿದ್ದಾರೆ. ಇವರನ್ನು ಇಬ್ನ್ ಕುಹಾಫ ಅಬೂಬಕ್ಕರ್ (ರ.ಅ) ವಿಶ್ವಾಸವಿರಿಸಿದ್ದಾರೆ.

ನಾನು ಹೇಳಿದೆ:ಹೌದು ನನಗೆ ಅಬೂಬಕ್ಕರ್ ಅವರನ್ನು ಪರಿಚಯವಿದೆ ಅವರು ಒ ಳ್ಳೆಯ ಸ್ವಭಾವ ಗುಣ ಇರುವವರು. ನನಗೆ ಅವರನ್ನು ತುಂಬಾ ಇಷ್ಟ ಇವರ ಕಾರ್ಯಕ್ರಮವೊಂದರಲ್ಲಿ ನಾನು ಪಾಲ್ಗೊಂಡಿದ್ದೇನೆ. ನಾನು ಅಬೂಬಕ್ಕರ್ (ರ.ಅ)ರನ್ನು ಭೇಟಿಯಾದೆ. ಅವರಲ್ಲಿ ಕೇಳಿದೆ ನಾನು ತಿಳಿದ ಎಲ್ಲಾ ವಿಷಯಗಳು ನಿಜವೇ? ಅಬೂಬಕ್ಕರ್ (ರ) ರವರು ಹೇಳಿದರು: ಹೌದು ಎಲ್ಲವೂ ನಿಜ. ಮತ್ತೆ ನನಗೆ ಇಸ್ಲಾಮಿನ ಬಗ್ಗೆ ತಿಳಿಸಿಕೊಟ್ಟರು. ನಾನು ಬುಸರದಲ್ಲಿ ನಡೆದ ಘಟನೆಯನ್ನು ಅಬುಬಕರ್ (ರ.ಅ) ರವರಿಗೆ ವಿವರಿಸಿ ಕೊಟ್ಟೆ. ಆಗ ಅಬೂಬಕರ್ ರವರು ಆಶ್ಚರ್ಯಚಕಿತರಾದರು. ನಂತರ ನನ್ನನ್ನು ಪ್ರವಾದಿಯವರ ಸನ್ನಿಧಿಗೆ ಹಾಜರುಪಡಿಸಿದರು. ಪ್ರವಾದಿಯವರು ನನ್ನನ್ನು ಇಸ್ಲಾಮಿಗೆ ಬರಮಾಡಿಕೊಂಡರು ಕುರಾನಿನಿಂದ ಒಂದು ವಚನವನ್ನು ಓದಿಕೊಟ್ಟರು. ತದನಂತರ ಇಹಲೋಕ ಮತ್ತು ಪರಲೋಕದ ಕುರಿತು ಹೇಳಿಕೊಟ್ಟರು. ಬುಸರಾದಲ್ಲಿ ನಡೆದ ಘಟನೆಯು ಪ್ರವಾದಿರ್ಯರೊಂದಿಗೂ ನಾನು ಹೇಳಿದೆ. ಪ್ರವಾದಿಯವರಿಗೆ ಅತೀವ ಸಂತೋಷವಾಯಿತು. ನನ್ನ ಮನಸ್ಸು ವಿಶಾಲವಾಯಿತು. ನನಗೆ ತುಂಬಾ ಸಂತೋಷವೂ ಆಯ್ತು. ನಾನು ಜೋರಾಗಿ ಶಹಾದತ್ ಕಲಿಮ ನುಡಿದೆ.

                         *************

ತ್ವಲ್ಹ (ರ.ಅ) ಹಲವಾರು ನಾಮಗಳಿಂದ ಪ್ರಸಿದ್ಧರಾಗಿದ್ದಾರೆ. ತ್ವಲ್ಹತ್ ಖೈರ್, ತ್ವಲ್ಹತ್ ಜೂದ್ .ಇವೆಲ್ಲಾ ನಾಮಗಳು ಬರಲು ಕಾರಣ ಉಹ್ದ್ ಯುದ್ಧದಲ್ಲಿ ಎಲ್ಲರೂ ಹೆದರಿ ಹಿಂದುರಿಗಿದಾಗ ಪ್ರವಾದಿಯರ ಜೊತೆಗೆ ಧೀರತೆಯಿಂದ ಹೋರಾಡಿದ ಹತ್ತು ಮಂದಿಯಲ್ಲೊಬ್ಬರಾಗಿದ್ದಾರೆ ಇವರು.

ತ್ವಲ್ಹ (ರ.ಅ)ರವರು ದೊಡ್ಡ ವ್ಯಾಪಾರಸ್ಥರಾಗಿದ್ದರು. ಇವರ ವ್ಯಾಪಾರವು ಹಲವಾರು ಸ್ಥಳಗಳಲ್ಲಿ ವಿಸ್ತರಿಸಿದ್ದವು. ಒಂದು ದಿವಸ ಹಳರ್ ಮೌತ್ ನಿಂದ ಇವರಿಗೆ ವ್ಯಾಪಾರದಿಂದ ಎಪ್ಪತ್ತು ಸಾವಿರ ದಿರ್ಹಂ ದೊರೆಯಿತು. ಇದರಿಂದ ಹೆದರಿಕೊಂಡು ಇಡೀ ರಾತ್ರಿ ಅಳುತ್ತಾ ಇದ್ದರು. ಇದನ್ನು ಕಂಡ ಹೆಂಡತಿ ಕೊಠಡಿಗೆ ಬಂದರು. ಯಾತಕ್ಕಾಗಿ ಅಳುತ್ತಿದ್ದೀರಾ ಏನಾಯ್ತು? ತ್ವಲ್ಹ (ರ.ಅ)ಹೇಳಿದರು ಇಲ್ಲ ನಾನು ಯೋಚಿಸುತ್ತಿರುವುದು ನಾನು ಇಷ್ಟೊಂದು ಸಂಪತ್ತು ಹೇಗೆ ಇಡಲಿ ಅಲ್ಲಾಹನು ನನ್ನ ಮೇಲೆ ಏನು ಚಿಂತಿಸಬಹುದು. ನನ್ನ ಸಮುದಾಯದವರು ಕಷ್ಟ ಪಡುವಾಗ ನಾನು ಹೇಗೆ ಮನೆಯಲ್ಲಿ ಸುಖವಾಗಿ ಮಲಗುವುದು? ಆದುದರಿಂದಲೇ ನಾಳೆ ಮುಂಜಾನೆ ಎಲ್ಲಾ ಹಣವನ್ನು ಜನರಿಗೆ ಹಂಚು ಎಂದು ಗದ್ಗದಿತರಾದರು.

ಬೆಳಿಗ್ಗೆಯಾದ ಕೂಡಲೇ ಬಡವರಿಗೆ, ಮದೀನಕ್ಕಾಗಮಿಸಿದ ಮುಹಾಜಿರ್ ಗಳಿಗೆ ಸಂಪತ್ತನ್ನು ವಿತರಿಸಿದರು.

                            **************

ಒಂದು ದಿವಸ ತ್ವಲ್ಹ (ರ.ಅ) ರವರ ಬಳಿ ಒಂದು ವ್ಯಕ್ತಿ ಬಂದು ಕೇಳಿದರು ನನಗೊಂದು ಸನ್ಮಾನ ನೀಡಬೇಕು. ತ್ವಲ್ಹ (ರ.ಅ)ಹೇಳುತ್ತಾರೆ: ಇಂತಹ ಮನುಷ್ಯನನ್ನು ನಾನೆಂದೂ ಕಂಡಿಲ್ಲ. ನಾನು ಹೇಳಿದೆ ನನಗೊಂದು ಜಮೀನಿದೆ. ಅದಕ್ಕೆ ಮೂರು ಸಾವಿರ ದಿರ್ಹಂ ಮೌಲ್ಯವಿದೆ. ನಿಮಗೆ ಬೇಕಾದರೆ ಆ ಭೂಮಿ ಅಥವಾ ಅದರ ಮೌಲ್ಯವನ್ನು ನೀಡುತ್ತೇನೆ. ಆಗ ಆ ಮನುಷ್ಯನು ಹೇಳಿದ: ನನಗೆ ಅದರ ಮೌಲ್ಯ ಕೊಡಿ. ಇವರು ಆ ಜಮೀನಿನ ಮೌಲ್ಯದ ದರವನ್ನು ನೀಡಿದರು.

ಇಂತಹಾ ಹಲವಾರು ಘಟನೆಗಳು ಇವರ ಜೀವನದಲ್ಲಿ ನಡೆದಿದೆ . ಬಡವರ ಬಂಧು ಆಗಿದ್ದರು ಇವರು.

 

Related Posts

Leave A Comment

Voting Poll

Get Newsletter