ಸಹನೆಯ ಸಂಕೇತ ಸಈದ್ ಬಿನ್ ಝೈದ್
ಸಹನೆಯ ಸಂಕೇತ ಸಈದ್ ಬಿನ್ ಝೈದ್

ಝೈದ್ ಬಿನ್ ಅಮೃ ಬಿನ್ ನುಫೈಲ್ ಅವರು ದೂರ ನಿಂತು ಕುರೈಶಿಗಳೊಂದಿಗೆ ಜನರ ಗುಂಪೊಂದನ್ನು ನೋಡುತ್ತಿದ್ದರು. ಮಕ್ಕಾ ನಿವಾಸಿಗಳು ತಮ್ಮ ಆಚಾರಗಳನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದರು. ಈ ವೇಳೆ ಪುರುಷರು ಅಮೂಲ್ಯವಾದ ರೇಷ್ಮೆಯ ತಲೆಕಟ್ಟು ಹಾಗೂ ಯಮನಿ ಆಭರಣಗಳನ್ನು ಧರಿಸಿದ್ದರು. ಮಕ್ಕಳು ಹಾಗೂ ಹೆಂಗಸರು ಅತ್ಯಮೂಲ್ಯವಾದ ವಸ್ತ್ರಗಳನ್ನು ಧರಿಸಿದ್ದಾರೆ. ಕೆಲವರು ತಮ್ಮ ಸಾಕುಪ್ರಾಣಿಗಳನ್ನು ತೆಗೆದು ಕೊಂಡು ಹೋಗುತ್ತಿದ್ದರು. ಆ ನಿಮಿಷ ಝೈದ್ ರವರು ಕಾಬಾಗೆ  ಹಿಂದಿರುಗಿ ಹೇಳುತ್ತಾರೆ: ಓ ಖುರೈಶೀ ಜನರೇ ...ಆ ಸಾಕು ಪ್ರಾಣಿಗಳನ್ನು ಸೃಷ್ಟಿಸಿದವನು ಅಲ್ಲಾಹನಾಗಿದ್ದಾನೆ. ಅಲ್ಲಾಹನು ನೀಡಿದ  ಮಳೆಯಿಂದಾಗಿದೆ ಅದರ ದಾಹ ನೀಗಿದ್ದು, ಅಲ್ಲಾಹನು ಬೆಳೆಸಿದ ಹುಲ್ಲುಗಳಿಂದಾಗಿದೆ ಅದರ ಹಸಿವು ನೀಗಿದ್ದು. ಈಗ ನೀವು ಅಲ್ಲಾಹನಲ್ಲದ ಬೇರೆ ದೇವರಿಗೆ ಬಲಿಕೊಡುತ್ತಿದ್ದೀರಿ. ನಾನು ನಿಮ್ಮನ್ನು ಅಜ್ಞಾನಿಗಳಾಗಿ ಕಾಣುತ್ತಿದ್ದೇನೆ. 

ಇದೇ ವೇಳೆ ತನ್ನ ಚಿಕ್ಕಪ್ಪರಾದ ಖತ್ತಾಬ್ ಮುಂದೆ ಬಂದು ಕೆನ್ನೆಗೆ ಹೊಡೆದರು ಮತ್ತು ಹೇಳಿದರು : ನಿನ್ನ ಈ ಅಜ್ಞಾನಿಕ ವಿಷಯ ಎಷ್ಟು ದಿವಸ ಕೇಳಬೇಕು. ನೀನು ನಮ್ಮ ಸಹನೆಯನ್ನು ಪರೀಕ್ಷಿಸುತ್ತಿದ್ದೀಯಾ. ಹೀಗೆ ಹಲವಾರು ಜನರು ಅವರನ್ನು ಥಳಿಸಿದರು,  ಓಡಿಸಿದರು ಹಾಗೆ ಝೈದ್ ರವರು ಮಕ್ಕಾದಿಂದ ಹೊರ ಹೋಗಿ ಹಿರಾ ಪರ್ವತಕ್ಕೆ ತಲುಪಿದರು. ಅವರನ್ನು ನಿರೀಕ್ಷಿಸಲು ಖುರೇಶಿ ಕಾವಲುಗಾರರನ್ನು ನೇಮಿಸಿದ್ದರು ಮತ್ತು ಅವರಿಗೆ ಮಕ್ಕಾ ನೋಡಲು ಸಾಧ್ಯವಾಗಲಿಲ್ಲ.

**********

ಒಮ್ಮೆ ಝದ್ ಬಿನ್ ಅಮೃ ಬಿನ್ ನುಫೈಲ್ ರವರು ಖುರೈಶೀ ನಾಯಕರೊಂದಿಗೆ ಚರ್ಚೆ ನಡೆಸುತ್ತಿದ್ದರು. ಇದರಲ್ಲಿ ವರಖತು ಬಿನ್ ನೌಫಲ್, ಅಬ್ದುಲ್ಲಾಹಿ ಬಿನ್ ಜಹ್ಸ್, ಉಸ್ಮಾನ್ ಬಿನ್ ಹಾರಿನ್ ಉಪಸ್ಥಿತರಿದ್ದರು. ಅರಬ್ ಖಂಡ ಹೇಗೆ ಕೆಡುಕಿನಲ್ಲಿ ಮುಳುಗಿತು? ಇದಾಗಿತ್ತು ಇವರ ಚರ್ಚೆಯ ವಿಷಯ. ಈ ವೇಳೆ ಝೈದ್ (ರ) ಆಗಮಿಸಿದರು.

“ನಿಶ್ಚಯವಾಗಿಯೂ ನಿಮ್ಮ ಸಮುದಾಯ ಕೆಟ್ಟ ಮಾರ್ಗದಲ್ಲಿದೆ, ಹಾಗೆಯೇ ನೀವು ಇಬ್ರಾಹಿಂ ನೆಬಿಯವರ ಮಾರ್ಗವನ್ನು ಧಿಕ್ಕರಿಸಿ ತಪ್ಪಾಗಿ ನಡೆದುಕೊಳ್ಳುತ್ತಿದ್ದೀರಿ. ನೀವು ವಿಜಯವನ್ನು ಆಗ್ರಹಿಸುತ್ತಿದ್ದರೆ ಒಂದು ಒಳ್ಳೆಯ ಧರ್ಮ ಸ್ವೀಕರಿಸಿ" ಎಂದರು ಝೈದ್ (ರ).

ಈ ವೇಳೆ ನಾಲ್ಕು ಜನರು ಯಹೂದಿ, ನಸ್ರಾನಿ ಧರ್ಮದ ನೇತಾರರ ಹತ್ತಿರ ಹೋದರು. ವರಖತ್ ಬಿನ್ ನೌಫಲ್ ನಸ್ರಾನಿಯಾದರು. ಅಬ್ದುಲ್ಲಾಹಿ ಬಿನ್ ಜಹ್ಶ್, ಉಸ್ಮಾನ್ ಬಿನ್ ಹಾರಿಸ್ ರವರಿಗೆ ಧರ್ಮ ಸಿಗಲಿಲ್ಲ. ಝೈದ್ (ರ) ಹನೀಫೀ ಮತ ಹುಡುಕುತ್ತಾ ಶಾಂ ತಲುಪಿದರು. ಎಲ್ಲರಲ್ಲಿಯೂ ಹನೀಫಿ ಧರ್ಮದ ಕುರಿತು ಕೇಳಿದರು. ದಾರಿ ಮಧ್ಯೆ ಒಂದು ಅಪರಿಚಿತ ವ್ಯಕ್ತಿ ಬಂದು ಕೇಳಿದರು.

“ನೀವು ಹನೀಫೀ ಧರ್ಮ ಹುಡುಕುವವರ ಹಾಗೆ ಕಾಣುತ್ತಿದೆ” ಆಗ ಝೈದ್ (ರ) ಹೌದು ಎಂದರು. ಆ ವ್ಯಕ್ತಿ ಹೇಳಿದರು :ನೀವು ಯಾತಕ್ಕಾಗಿ ಇಷ್ಟು ದೂರ ಬಂದಿದ್ದೀರಿ, ನಿಮ್ಮ ಊರಿಗೆ ಅಲ್ಲಾಹನು ಒಬ್ಬರನ್ನು ನಿಯೋಗಿಸಿದ್ದಾನೆ. ಅವರು ಇಬ್ರಾಹಿಂ ನಬಿಯವರ ಧರ್ಮದ ಆಶಯವನ್ನು ಪ್ರಭೋಧನೆ ನಡೆಸುತ್ತಾರೆ. ನೀವು ಅವರ ಧರ್ಮವನ್ನು ಸ್ವೀಕರಿಸಬಹುದು ಎಂದು ಹೇಳಿದರು. ತಿರುಗಿ ಮಕ್ಕಾಗೆ ಹೋಗುತ್ತಿರುವಾಗ ಗುಂಪೊಂದು ಬಂದು ಇವರನ್ನು ಕೊಂದಿತು. ಮರಣದ ವೇಳೆ ಝೈದ್ ಹೇಳುತ್ತಾರೆ “ಅಲ್ಲಾಹನೇ ನೀನು ನನ್ನನ್ನು ಒಳ್ಳೆಯ ವಿಷಯದಿಂದ ತಡೆದಿದ್ದೀಯ, ಅದೇ ವಿಷಯದಲ್ಲಿ ನನ್ನ ಮಗನನ್ನು ತಡೆಯದಿರು” ಎಂದು ಪ್ರಾರ್ಥಿಸುತ್ತಾ ನಿಧನರಾದರು.

ಅಲ್ಲಾಹನು ಝೈದ್ ರವರ ಪ್ರಾರ್ಥನೆ ಸ್ವೀಕರಿಸಿದನು. ತನ್ನ ಮಗನಾದ ಸಈದ್ ಒಳ್ಳೆಯ ಮತವನ್ನು ಹುಡುಕಿದರು ನಂತರ ಮುಸ್ಲಿಮರಾದರು. ತನ್ನ ಪತ್ನಿಯಾದ ಫಾತಿಮಾ ಬಿನ್ತ್ ಖತ್ತಾಬ್ ಕೂಡಾ ಇಸ್ಲಾಂ ಸ್ವೀಕರಿಸಿದರು.

ಸಈದ್ ಬಿನ್ ಝೈದ್ ತನ್ನ ಯವ್ವನ ಕಾಲವನ್ನು ಪೂರ್ಣವಾಗಿ ಇಸ್ಲಾಮಿನ ಪ್ರಭೋಧನೆಗಾಗಿ ವ್ಯಯಿಸಿದರು. ಇವರಿಗೆ ಇಪ್ಪತ್ತು ವರ್ಷ ಆಗುವ ಮುನ್ನವೇ ಇವರು ಇಸ್ಲಾಂ ಧರ್ಮವನ್ನು ಸ್ವೀಕರಿಸಿದರು. ಪ್ರವಾದಿವರ್ಯರೊಂದಿಗೆ ಹಲವಾರು ಯುದ್ಧಗಳಲ್ಲಿ ಭಾಗವಹಿಸಿದವರು. ಡಮಸ್ಕಸ್ ನಲ್ಲುಂಟಾದ ವಿಜಯಕ್ಕೂ ಇವರು ಸಾಕ್ಷಿಯಾಗಿದ್ದಾರೆ.

ಉಮಯ್ಯ ರವರ ಕಾಲದಲ್ಲಿ ಅರ್ವಾ ಬಿನ್ ಉವೈಸ್ ರವರು ಸುಳ್ಳು ಕಥೆಯನ್ನು ಸಈದ್ ಬಿನ್ ಝದ್ ರ ಮೇಲೆ ಹೊರಿಸಿದರು. “ಸಈದ್ ರವರು ನನ್ನ ಭೂಮಿಯ ಸ್ವಲ್ಪ ಭಾಗವನ್ನು ಕಳವು ಮಾಡಿದ್ದಾರೆ, ಇದರಿಂದ ಅಲ್ಲಿನ ಎಲ್ಲಾ ಜನರು ಗೇಲಿ ಮಾಡಿದರು. ಈ ವಿಷಯ ಮರ್ವಾನ್ ಬಿನ್ ಹಕಂ ರವರ ಹತ್ತಿರ ತಲುಪಿತು. ಇವರು ಸಈದ್ ರೊಂದಿಗೆ ಪ್ರಶ್ನೆ ಕೇಳಿದರು. ಸಈದ್ ಹೇಳಿದರು "ನಾನು ಆಕೆಯ ಭೂಮಿ ಕಳವು ಮಾಡಿಲ್ಲ. ನಾನು ಹೇಗೆ ಕಳವು ಮಾಡುವುದು ಪ್ರವಾದಿಯು ಅದರ ಶಿಕ್ಷೆಯ ಗಾಂಭೀರ್ಯತೆಯನ್ನು ತಿಳಿಸಿದ್ದಾರೆ ". ನಂತರ ಇವರು ಹೇಳಿದರು : ಇವಳು ಹೇಳುವುದರಲ್ಲಿ ಸುಳ್ಳು ಇದ್ದರೆ, ಕಣ್ಣು ಕುರುಡಳಾಗಬೇಕು ಮತ್ತು ಬಾವಿಗೆ ಬೀಳುವಂತೆ ಮಾಡು ಮತ್ತು ನಾನು ಏನೂ ಕದ್ದಿಲ್ಲ ಎಂದು ಮುಸ್ಲಿಮರಿಗೆ ತಿಳಿಸು ಎಂದು ಅಲ್ಲಾಹನಲ್ಲಿ ಕೇಳಿದರು.

ಸ್ವಲ್ಪ ದಿನಗಳ ನಂತರ ಆಕೆಯು ಕುರುಡಳಾದಳು. ಅವಳು ಭೂಮಿಯಲ್ಲಿ ತಿರುಗಿ ಬಾವಿಗೆ ಬಿದ್ದಳು. ಎಷ್ಟು ಅದ್ಭುತವಾದ ಕಾರ್ಯ. ನೆಬಿಯವರು ಹೇಳಿದ್ದಾರೆ : ಅಕ್ರಮಿಸಲ್ಪಟ್ಟವನ ಪ್ರಾರ್ಥನೆಯನ್ನು ಅಲ್ಲಾಹನು ಸ್ವೀಕರಿಸುತ್ತಾನೆ. ಸಈದ್ (ರ) ಸ್ವರ್ಗದ ಶುಭವಾರ್ತೆ ತಿಳಿಸಿದ ಹತ್ತು ಮಂದಿಯಲ್ಲೊಬ್ಬರಾಗಿದ್ದಾರೆ.

 

Related Posts

Leave A Comment

Voting Poll

Get Newsletter