ಹೃದಯವಂತ ಸುರಾಖಾ ಬಿನ್ ಮಾಲಿಕ್
ಹೃದಯವಂತ ಸುರಾಖಾ ಬಿನ್ ಮಾಲಿಕ್
ಪ್ರವಾದಿಯರ ಇಸ್ಲಾಂ ಪ್ರಬೋಧನೆಯಿಂದ ಸತ್ಯ ನಿಷೇಧಿಗಳು ಕುಪಿತಗೊಂಡರು. ಶತ್ರುಗಳು ಪ್ರವಾದಿ (ಸ) ರನ್ನು ಮತ್ತು ಅಬೂಬಕ್ಕರ್ (ರ) ಹುಡುಕಲು ತೊಡಗಿದರು. ಈ ವೇಳೆ ಸತ್ಯ ನಿಷೇಧಿಗಳು ಅಬೂಬಕ್ಕರ್ (ರ) ರವರ ಮನೆಗೆ ನುಗ್ಗಿ, ಮಗಳಾದ ಅಸ್ಮಾ(ರ) ರವರಲ್ಲಿ ತಂದೆ ಎಲ್ಲಿದ್ದಾರೆ? ಎಂದು ಕೇಳಿದರು. ಗೊತ್ತಿಲ್ಲ ಎಂದಾಗ ಕುಪಿತನಾದ ಅಬೂ ಜಹಲ್ ಅಸ್ಮಾ(ರ) ರವರ ಕೆನ್ನೆಗೆ ಬಾರಿಸಿದರು, ತಕ್ಷಣ ಅವರು ನೆಲಕ್ಕುರುಳಿದರು. 
  ಮುಹಮ್ಮದ್ [ಸ.ಅ] ರು ಮಕ್ಕಾವನ್ನು ತೊರೆದಿದ್ದಾರೆ ಎಂದು ತಿಳಿದ ಖುರೈಷಿಗಳಿಗೆ ಹುಚ್ಚಾದಂತಾಯಿತು. ಅವರನ್ನು ಹುಡುಕಲು ಎಲ್ಲರನ್ನೂ ನೇಮಿಸಿಕೊಂಡು ಅವರು ಹೋದ ದಾರಿಯನ್ನು ಹಿಂಬಾಲಿಸಿದರು. ಅವರು ಸೌರ್ ಗುಹೆಯನ್ನು ತಲುಪಿದಾಗ ಉಮ್ಮಯ್ಯತ್ ಬಿನ್ ಖಲಫ್ ಹೇಳಿದನು: ಅಲ್ಲಿ ನೋಡಿ ಜೇಡರ ಬಲೆಗಳು ಕಾಣಿಸುತ್ತಿದೆ. ಅವರು ಆ ಗುಹೆಯ ಒಳಗಿರಲು ಸಾಧ್ಯವಿಲ್ಲ. ಆದರೆ ಅದೃಷ್ಟವಶಾತ್ ಅಬೂಬಕ್ಕರ್ ಸಿದ್ದೀಕ್ (ರ) ಮತ್ತು ಪ್ರವಾದಿ ಅಲ್ಲಿಯೇ ತಂಗಿದ್ದರು. 
ಅಬೂಬಕ್ಕರ್ (ರ) ರು ಹೇಳುತ್ತಾರೆ: ಪ್ರವಾದಿಯವರಿಗೆ ಏನಾದರೂ ತೊಂದರೆ ಉಂಟಾಗಬಹುದು ಎಂದು ಹೆದರಿ ನಾನು ಅಳುತ್ತಿದ್ದೆ. ಪ್ರವಾದಿ [ಸ.ಅ]ರವರು ನನಗೆ ಧೈರ್ಯ ತುಂಬುತ್ತಾ ಹೇಳಿದರು. ಓ ಅಬೂಬಕ್ಕರ್ ದುಃಖ ಪಡಬೇಡ ಅಲ್ಲಾಹು ನಮ್ಮೊಂದಿಗಿದ್ದಾನೆ. ಆದ್ದರಿಂದ ಅಲ್ಲಾಹನು ನೀತಿವಂತರ ಹೃದಯಕ್ಕೆ ಶಾಂತಿಯನ್ನು ಕಳುಹಿಸುವವನು ಮತ್ತು ಅವರ ಪಾದಗಳನ್ನು ಕಾಣಲಾಗದಂತೆ ಮಾಡುವನು. ಹಲವಾರು ಕಷ್ಟಗಳ ನಂತರ ಪ್ರವಾದಿ ಮತ್ತು ಅಬೂಬಕರ್ [ರ] ಅಲ್ಲಿಂದ ಮದೀನಕ್ಕೆ ಯಾತ್ರೆ ಹೊರಟರು. ಆದರೂ ಖುರೈಶಿಗಳು ಪ್ರವಾದಿಯನ್ನು ಹುಡುಕುವುದರಲ್ಲಿ ಹಿಂಜರಿಯಲಿಲ್ಲ. ಮಕ್ಕಾ ಮತ್ತು ಮದೀನಾದವರೆಗಿರುವ ರಸ್ತೆಯಲ್ಲಿ ಅವರು ಹುಡುಕಿದರು. ಏಕೆಂದರೆ ಯಾರಾದರೂ ಪ್ರವಾದಿಯನ್ನು ಜೀವಂತವಾಗಿ ಅಥವಾ ಕೊಂದು ಅವರ ಹೆಣವನ್ನು ತಂದರೆ ಉತ್ತಮವಾದ ನೂರು ಕೆಂಪು ಒಂಟೆಗಳನ್ನು ಅವನಿಗೆ ಇನಾಮಾಗಿ ನೀಡಲಾಗುತ್ತೆ! ಈ ಸಮಯದಲ್ಲಿ ಸುರಾಖಾ ಬಿನ್ ಮಾಲಕ್ ರವರು ಮಕ್ಕಾದ ರಸ್ತೆಯಲ್ಲಿ ಇದ್ದರು. ಈ ಸನ್ಮಾನಗಳನ್ನು ಕೇಳಿದ ಸುರಾಖಾ ರವರು ಪ್ರವಾದಿಯನ್ನು ಹಿಡಿಯಲು ಬಯಸಿ ತನ್ನ ಆಸನದಿಂದ ಏಳುವ ಮೊದಲೇ ಒಬ್ಬ ವ್ಯಕ್ತಿ ಅಲ್ಲಿಗೆ ಬಂದು ಹೇಳುತ್ತಾನೆ: ನಾನೀಗ ಮುಹಮ್ಮದ್ ಮತ್ತು ಅಬೂಬಕರ್ ರವರ ಭೇಟಿ ಮಾಡಿ ಬಂದಿದ್ದೇನೆ. 
ಆದರೆ ಸುರಾಖಾ ಆ ವ್ಯಕ್ತಿಯ ಮಾತುಗಳನ್ನು ಕೇಳದೆ ಸನ್ಮಾನಕ್ಕೆ ಇರುವ ಅತಿಯಾಸೆಯಿಂದ ತನ್ನ ಕುದುರೆ ಹಿಡಿದು ಹೊರಟನು. ಅವರು ಮುಹಮ್ಮದಿನ ಬಳಿ ತಲುಪುವಷ್ಟರಲ್ಲಿ ಅವನ ಕುದುರೆ ಮರುಭೂಮಿಯಲ್ಲಿ ಮಂಡಿಯೂರಿತು. ಅವನು ಕುದುರೆಯಿಂದ ಇಳಿದು ಏನಾಯ್ತು ಎಂದು ನೋಡುವಷ್ಟರಲ್ಲಿ ಮಹಮ್ಮದ್ ಅವರಿಂದ ದೂರ ತಲುಪಿದ್ದಾರೆ ಎಂದು ತಿಳಿದ ಇವರು ನೂರು ಒಂಟೆಯ ಆಸೆ ಮುರಿದರು. ಅವನನ್ನ ದೂರದಿಂದ ಕಂಡ ಪ್ರವಾದಿಯು ಹೇಳುತ್ತಾರೆ “ಓ ಸುರಾಖ ಕಿಸ್ರಾದ ಬಲೆಗಳು ನಿನ್ನ ಕೈಗೆ ಬಂದರೆ  ಹೇಗಿರಬಹುದು " ಎಂದು ಹೇಳಿದರು. ಆ ಒಂದು ಕಾಲದಲ್ಲಿ ಒಳ್ಳೆಯ ಹೆಸರು ಕೇಳಿರುವ ಒಂದು ರಾಜ್ಯ ವಂಶವಾಗಿತ್ತು ಕಿಸ್ರ. ಈ ವಿಷಯಗಳನ್ನು ಕೇಳದೆ ಸುರಾಖಾ ಅಲ್ಲಿಂದ ಹಿಂತಿರುಗಿ ಹೋದರು. ಆದರೆ ಉಮರ್ [ರ] ಕಾಲದಲ್ಲಿ ಸಅದ್ ಬಿನ್ ಅಬೀ ವಕ್ಖಾಸ್ [ರ] ನಾಯಕನಾಗಿ ಕಿಸ್ರಾವನ್ನು ಕೈ ವಶಪಡಿಸಿದ್ದರು. ಅವರು ನಂತರ ಮದೀನಕ್ಕೆ ಮರಳಿ ಬಂದಾಗ ಸುರಾಖಾ ಇಸ್ಲಾಂ ಸ್ವೀಕರಿಸಿದ್ದರು. ಆಗ ಉಮರ್ [ರ] ಕಿಸ್ರಾದ ಬಳೆಗಳನ್ನು ಸುರಾಖಾರ ಕೈಗಳಿಗೆ ಹಾಕುತ್ತಾರೆ ಈ ಒಂದು ಸಂದರ್ಭದಲ್ಲಿ ಸುರಾಖಾಗೆ ಪ್ರವಾದಿಯವರ ಮಾತುಗಳು ನೆನಪಾಗುತ್ತದೆ.

Related Posts

Leave A Comment

Voting Poll

Get Newsletter