ಸಲಫಿ ಮತ್ತು  ಔರತ್

ಔರತ್ ಮುಚ್ಚುವಿಕೆಯು ( ನಗ್ನತೆಯನ್ನು ವಸ್ತ್ರದಿಂದ ಮುಚ್ಚುವುದೆಂಬ) ವಿಷಯದಲ್ಲಿ ಇಸ್ಲಾಮಿನಲ್ಲಿ ಕೆಲವು ನೀತಿಗಳಿವೆ. ಈ ನೀತಿಗಳೆಲ್ಲ ಗಾಳಿಗೆ ತೂರಿದ್ದಾರೆ ಸಲಫಿಗಳು. ಅವರು ಬರದ  ಪ್ರಸ್ತಾಪಗಳು ಬಹಳ ಸ್ವಾರಸ್ಯಕರವಾಗಿದೆ. ನಾಗರಿಕತೆಯುಳ್ಳ ಯಾರಿಗೂ ಹೇಸಿಗೆ ಹುಟ್ಟಿಸುವಂತಹ ಪ್ರಸ್ತಾಪಗಳನ್ನು ಈ ಸಲಫಿಗಳು ಮಾಡಿದ್ದಾರೆ. ೧೯೨೩ ರಲ್ಲಿ ಸಲಫಿ ವಿದ್ವಾಂಸರು  ಅಮಲಿಯ್ಯಾತಿನಲ್ಲಿ ಸರಿಯಾಗಿಯೇ ಬರೆದಿದ್ದರು ಆದರೆ ೧೯೬೨ ಕ್ಕೆ ತಲುಪಿದಾಗ ಇವರು ಎಲ್ಲಗೆ ತಲುಪಿದರು ಎಂಬೂದನ್ನು ಗಮನಿಸಿರಿ. ೧೦-೧೦-೧೯೮೨ ರಂದು ಬಿಡುಗಡೆ ಮಾಡಿದ ಒ.ಅ.ಅ ಅಹ್‌ಮದ್ ಮೌಲವಿ ಎಂಬ ಸಲಫಿ ಪಾದ್ರಿಯ  ಮುಸ್ಲಿಂ ಸ್ತ್ರೀಗಳ್ಕ್ ಅವಗಾಸಮುಂಡೋ ? ಎಂಬ ಪುಸ್ತಕದಲ್ಲಿ ( ಪುಟ ೮೭ -೮೮ ) ಹೀಗೆ ಬರೆದಿದ್ದಾನೆ. ಗಂಡಾಗಲೀ ಹೆಣ್ಣಾಗಲೀ ಎದುರು ಗುಪ್ತಾಂಗ ಮತ್ತು ಹಿಂದೆ ಗುಪ್ತಾಂಗವನ್ನು ತೆರೆದು ನಡೆಯಲೇ ಬಾರದು ಎನ್ನುವೂದು ಸುನಿಶ್ಚಿತ. ಹೆಂಗಸರು ಮುಖ ಕೈ ಕಾಲು ಮುಚ್ಚುವೂದು ಬೇಕೆಂದಿಲ್ಲ ಎನ್ನುವೂದು ನಿಶ್ಚಿತ. ನಮಾಜಿನಲ್ಲಿ ಎಷ್ಟು ಮುಚ್ಚಬೇಕು ಅಲ್ಲದಿರುವಾಗ ಎಷ್ಟು ಮುಚ್ಚಬೇಕು ಎಂಬ ಯಾವುದೇ ವ್ಯವಸ್ಥೆ ಶರಿಅತ್ತಿನಲ್ಲಿ ಇಲ್ಲ ( ಇನ್ನವುಝು ಬಿಲ್ಲಾಯಿ) ಸಂಕ್ಷಿಪ್ತವಾಗಿ ಹೇಳುವೂದಾದರೆ ಸಂಗತಿ ಮೂರರಲ್ಲಿ  ೧ - ಔರತ್ (ಗೋಪ್ಯ) ಅಂದರೆ ಎದುರು ಮತ್ತು ಹಿಂದಿನ ಗುಪ್ತಾಂಗ ಮಾತ್ರ ಇವೆರಡನ್ನು ಸ್ತ್ರೀ ಪುರುಷರು ಎಲ್ಲೂ ಮರೆಮಾಚಬೇಕು ಆಲೋಚಿಸಿ ನೋಡಿ ! ಹೆಣ್ಣಾಗಲೀ ಗಂಡಾಗಲೀ ನಮಾಜಿನಲ್ಲಿಯೂ ಅಲ್ಲದ ವೇಳೆಯೂ ಒಂದು ಕೋಮನ ಕಟ್ಟಿದರೆ ಸಾಕು ಎಂದರ್ಥ ! ಉಳಿದೆಲ್ಲವನ್ನೂ ತೆರೆಯಬಹುದು. ಉಳಿದದ್ದು ಎಷ್ಟು ಮುಚ್ಚಬೇಕು ಎಂಬ ನಿಯಮ ಇಸ್ಲಾಮಿನ ಶರೀಅತ್ತ್ ನಲ್ಲಿ ಇಲ್ಲವಂತೆ ! ಈ ವಿಷಯವನ್ನು ಅ ದುಷ್ಟಜಂತು ಸ್ಪಷ್ಟ  ಸ್ಪಷ್ಟವಾಗಿ ಬರೆಯೂದನ್ನು ನೋಡಿರಿ. ಎದುರು ಗುಪ್ತಾಂಗ ಮತ್ತು ಹಿಂದಿನ ಗುಪ್ತಾಂಗ ಇವೆರಡನ್ನು ಹೊರತುಪಡಿಸಿ ಉಳಿದ ಎಲ್ಲಾ ಭಾಗಗಳನ್ನು ತೆರೆದು ಬಂಧುಗಳ ಮುಂದೆ ನಡೆದಾಡಬಹುದು (೮೯-೯೦) ಅನ್ಯ ಪುರುಷರ ಜೋತೆ  ಮಸೀದಿಯಲ್ಲಿ  ಸ್ತ್ರೀಯರು ಇದೇ ರೀತಿ ನಮಾಜು ಮಾಡಬಹುದೇ ಎಂಬ ಪ್ರಶೆಗೆ ಇದೇ ಭೂಪಕೊಟ್ಟ ಉತ್ತರ ನೋಡಿರಿ ಹೆಂಗಸರು ಇದೇ ಸ್ಥಿತಿಯಲ್ಲಿ ಪುರುಷರ ಮುಂದೆ ಹಾಜರಾಗಬಹುದು ಅಂತಹ ಸಂದರ್ಭದಲ್ಲಿ ಗಂಡಸರು ದೃಷ್ಟಿ ಕೆಳಹರಿಸಬೇಕು (ಪುಟ ೮೯) ಹೇಗಿದೆ ? ಬರೇ ಒಂದು ಕೌಪೀನ ( ಕೋಮನ) ಕಟ್ಟಿಕೊಂಡು) ಸ್ತ್ರೀಯರು ಅನ್ಯ ಪುರುಷರಿರುವ ಮಸೀದಿಗೆ ಬರಬಹುದು. ಆಗ ಪುರುಷರು  ದೃಷ್ಟಿ ಕೆಳಹರಿಸಬೇಕು ! ಈ ಉಪದೇಶ ಯಾರಲ್ಲಾಗಿದೆ? ಸಲಫಿ ಯುವಕರಲ್ಲಿ ! ೧೯೮೨ ನವೆಂಬರ್ ೨೩ ಕೇರಳದ ಬಿತಾಯಿ ಎಂಬಲ್ಲಿ ಸಲಫಿ ಮಸೀದಿಗೆ  ನಮಾಜಿಗಾಗಿ ಬಂದ ಒಂಬತ್ತು ವರ್ಷದ ಹುಡುಗಿಯ ಮೇಲೆ ಅತ್ಯಾಚಾರ ನಡೆಸಿದ ( ನೋಡಿರಿ ಚಂದ್ರಿಕಾ ದಿನ ಪತ್ರಿಕೆ ೭-೧೦-೮೩ ) ಸಾಕ್ಷಾತ್  ಸಲಫಿ ಕಾಮಾಂಧರ ಎದುರಿಗೆ ಕೋಮನಕಟ್ಟಿಕೊಂಡು ತರುಣಿಯರು ಬಂದರೆ ಹೇಗಾದೀತು ? ಹೇ ಮೌಲವಿ.....! ನಿನ್ನಂತವರು ಈ ಜಗತ್ತಿನಲ್ಲಿ ಬೇರೆಯಾರಿದ್ದಾನೆ ? ಇಂತಹ ಇಬ್‌ಲೀಸ್‌ಗಳನ್ನು ನಾಯಕರನ್ನಾಗಿ ತಲೆಯ ಮೇಲೆ ಹೊತ್ತುಕೊಂಡು ತಿರುಗುವ ಈ ಸಲಫಿಗಳ ಹಣೆಬರಹಕ್ಕೆ ಏನೆನ್ನೋಣ ? ಇಸ್ಟೇ ಅಲ್ಲ ಕೌಫೀನವನ್ನೂ ಧರಿಸಬೇಕೆಂದಿಲ್ಲ ಬರೀ ನಗ್ನರಾಗಿಯೇ ನಮಾಜು ಮಾಡಬಹುದೆಂದೂ ಸಲಫಿಗಳ ಅಲ್ ಮನಾರ್ ನಲ್ಲಿ ( ೧೯೫೧ ಡಿಸೆಂಬರ್ ೨೦ ಸಂ೨. ಸಂ. ೧೭, ೧೮ ಪುಟ ೧೬ ) ರಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ ! ಸಲಫಿಗಳು ಇದೇ ರೀತಿ ಎಲ್ಲಾ ಆರಾದನೆಗಳಲ್ಲಿ ಕಲಬೆರಕೆ ಮಾಡಿದ್ದಾರೆ. ಜನರನ್ನು ತೌಹೀದಿಗೆ ಆಹ್ವಾನಿಸುವುದೆಂದು ಬಡಾಯಿಕೊಚ್ಚಿಕೊಳ್ಳುತ್ತಾ ಜನರ ಎಲ್ಲಾ ಆರಾದನೆಗಳನ್ನು ಹಾಲುಗೆಡಹಿ ಇಬ್‌ಲೀಸನಿಗೆನೆರವಾಗುವುದೇ ಇವರ ಕಾಯಕ. ನಮಾಜಿನ ಪರ‍್ಲ್‌ಗಳಿಗೂ ಈ ದುಷ್ಟ ಜನತೆ ಕೈ ಹಾಕಿದ್ದಾರೆ. ಕೇರಳ ನದ್‌ವತ್ತುಲ್ ಮುಜಾಹಿದೀನ್ ವಿದ್ಯಾಬ್ಯಾಸ ವಿಭಾಗವು ೫ನೇ ತರಗತಿಗೆ ಸಿದ್ದಪಡಿಸಿದ  ಇಸ್ಲಾಮಿಕ್ ಕರ್ಮ ಶಾಸ್ತ್ರಂ (೧೯೮೩) ಎಂಬ ಪುಸ್ತಕದಲ್ಲಿ ನಿಯ್ಯತ್ತನ್ನು ತಿರುಚಿದ್ದಾರೆ. ಪ್ರವಾದಿ (ಸ.ಅ) ಮೇಲೆ ಸ್ವಲತ್ ಹೇಳುವ ಪರ‍್ಲ್‌ನ್ನು ಬಿಟ್ಟಿದ್ದಾರೆ. ಪ್ರವಾದಿ (ಸ.ಅ) ರನ್ನು ಸಾಮಾನ್ಯ ಮನುಷ್ಯನನ್ನಾಗಿ ಚಿತ್ರೀಕರಿಸುವ ಇವರಿಗೆ ನಮಾಜಿನಲ್ಲಿ ಪ್ರವಾದಿ (ಸ.ಅ) ಹೆಸರು ಹೇಳಬೇಕು ಎನ್ನುವ ವಿಷಯ ಅರಗಿಸಿಕೊಳ್ಳಲಾಗಲಿಲ್ಲ ಹಾಗೂ ಜನಮನಸ್ಸುಗಳಿಂದ ಇದನ್ನು ಅಳಿಸಿಹಾಕಬೇಕೆಂದು ಶ್ರಮಿಸಿದರು. ನಮಾಜ್ ಬಾತ್ವಿಲ್ ಆದರೂ ಚಿಂತಿಲ್ಲ ಪ್ರವಾದಿ (ಸ.ಅ) ರನ್ನು ಸಾಧಾರಣ ಮನುಷ್ಯನನ್ನಾಗಿ ಚಿತ್ರಿಸಬೇಕು ಎನ್ನುವೂದು ಇವರ ಶೈತಾನಿನ ಯೋಚನೆಯಾಗಿದೆ ! ಅಷ್ಟಕ್ಕೆ ನಿಲ್ಲಲಿಲ್ಲ ೧೯೮೫ ಆಗುವ ಹೊತ್ತಿಗೆ ಒಟ್ಟು ೫ ಪರ‍್ಲ್‌ಗಳನ್ನು ಕಟ್ಟುಮಾಡಿ ೧೪ ರಿಂದ ೯ ಇಳಿಸಿದರು. ಮೂರನೇ ತರಗತಿಗೆ ಅಳವಡಿಸಿದ  ಕರ್ಮಶಾಸ್ತ್ರ ಪುಸ್ತಕದಲ್ಲಿ ಒಂದನೇ ಭಾಗ (ಪುಟ ೨೮)ದಲ್ಲಿ ನಿಯ್ಯತ್ ಹಾಗೂ ನಿಲ್ಲುವುದು, ತುಮಹ್‌ನೀನತ್, ಅತ್ತ್‌ಹಿಯ್ಯಾತ್ ಮತ್ತು ಸ್ವಲಾತ್‌ಗಾಗಿ ಕೂರುವೂದು ಹಾಗೂ ತರ್ತೀಬನ್ನು ಕೈ ಬಿಟ್ಟಿದ್ದಾರೆ. ಒಂದೇ ಒಂದು ಪರ‍್ಲ್ ಬಿಟ್ಟರೆ ನಮಾಜ್ ಸಿಂದುವಲ್ಲ ಎನ್ನುವೂದು ೧೪ ಶತಮಾನಗಳಿಂದ ಯಾವುದೇ ಭೇದ ಭಾವವಿಲ್ಲದೆ ಮುಸ್ಲಿಂ ಜನತೆ ವಿಶ್ವಾಸ ವಿರಿಸಿದ ಸತ್ಯ ಸಂಗತಿಯಾಗಿದೆ. ಹೀಗಿರುವಾಗ ೫ ಪರ‍್ಲ್‌ಗಳನ್ನು ಕೈಬಿಟ್ಟಿರುವ ಆದುನಿಕ ಸಲಫಿಗಳ ನಮಾಜಿನ ಅವಸ್ಥೆಯನ್ನು ಆಲೋಚಿಸಿರಿ ! ಬೆಳೆಯುವ ಸಲಫಿ ಮಕ್ಕಳ ನಮಜ್ ಬಹಳ ಮೋಜಿನದ್ದಾಗಿರುತ್ತದೆ. ವುಲೂ, ಜನಾಬತ್ ಸ್ನಾನ ಹೇಗೂ ಸರಿಯಿಲ. ಅಂತಹ ಜನರು ಅವರ ಮಸೀದಿಗಳಲ್ಲಿ ಹೇಗೆ ಮಲಗಿಕೊಂಡು ನಮಾಜ್ ಮಡುತ್ತಾರೆ ? ನಿಲ್ಲುವುದು ಖಡ್ಡಾಯವಿಲ್ಲ ತಾನೆ ! ಮಲಗಿ ಸ್ವಲ್ಪ ಸಮಯದಲ್ಲಿ ರುಕೂಹ್ ಮಡುತ್ತಾನೆ ಅಮೇಲೆ ಸುಜೂದ್ ಎರಡನ್ನೂ ಕೋಳಿ ಕಕ್ಕಿದಂತೆ ಮಾಡಿ ಮುಗಿಸುತ್ತಾನೆ. ತುಮಹ್‌ನೀನತ್ ಕಡ್ಡಾಯವಿಲ್ಲತಾನೆ ? ಮಲಗಿಕೊಂಡು ಅತ್ತಹಿಯ್ಯಾತ್ ಹೇಗಿರಬಹುದು ಇವರ ನಮಾಜ್ ! ಅದು ತರುಣ ತರಣಿಯಯರು ಕೌಫೀನ ಕಟ್ಟಿಕೊಂಡು ಅಥವಾ ಪೂರ್ಣ ನಗ್ನರಾಗಿ ಒಟ್ಟಾಗಿ ಮಲಗಿಕೊಂಡು ! ಇವರ ನಮಜ್‌ನ ಅವಸ್ಥೆಯೇ ಸ್ವಾರಸ್ಯಕರ !!!!!!!! ಬೀಚ್‌ಗಳಲ್ಲಿ ಹಿಪ್ಪಿಗಳು ನಡೆಸುವ ನಗ್ನ ಚೇಷ್ಠೆಗಳನ್ನು ಮೀರಿಸುವ ಚೇಷ್ಠೆಗಳಾಗಿರಬಹುದು.  ಓ ಕನ್ನಡ ನಾಡಿನ ಸಲಫಿಗಳೇ...... ನಿಮಗೆ ಇವರ ಹಣೆಬರಹ ಸರಿಯಾಗಿ ತಿಳಿದಿಲ್ಲ ಇವರು ತೋರಿಕೆಗೆ ಬಟ್ಟೆ ಧರಿಸಿರಬಹುದು ಸರಿಯಾಗಿ ನಮಾಜ್ ಮಾಡಿರಬಹುದು ಆದರೆ ನೀವು ಪೂರ್ಣರಾಗಿ ಇವರ ಕೈಯೊಳಗಾದರೆ ನಿಮ್ಮ ಬಟ್ಟೆ ಕಳಚಲಿದ್ದಾರೆ. ಆಗ ಮೂಗು ಮುಚ್ಚಿಕೊಂಡು ಓಡಿಹೊಗಬೇಕಾದ ಪರಿಸ್ಥಿತಿ ನಿಮ್ಮದಾದೀತು. ೯ ಪರ‍್ಲ್ ಉಳಿಸಿಕೊಂಡರೂ ಅದರಲ್ಲೂ ಇವರು ಕೃತ್ರಿಮ ನಡೆಸಿದ್ದಾರೆ.

*ಬಸೀರ್ ದಾರಿಮಿ ಕಳಂಜ

Related Posts

Leave A Comment

Voting Poll

Get Newsletter