ನಿಯ್ಯತ್

عَنْ عُمَرَ بْنِ الخَطَابِ قَالَ : سَمِعْتُ رَسُولَ اللهِ ﷺ يَقُولُ : " إِنَّمَا الأَعْمَالُ بِالنِّيَّاتِ ، وَإِنَّمَا لِكُلِّ امرىءٍ مَا نَوَى ، فَمَنْ كَانَتْ هِجْرَتُهُ إِلى اللهِ وَرَسُولَهُ فَهِجْرتُهُ إلى اللهِ وَرَسُولِهِ ، وَمَنْ كَانَتْ هِجْرَتُهُ لِدُنْيَا يُصِيبُهَا ، أو امرأةٍ يَنْكِحُهَا ، فَهِجْرَتُهُ إِلى مَا هَاجَرَ إِلَيْهِ " (رواه البخاري و مسلم)

ಉಮರ್ ಇಬ್ಬುಲ್ ಖತ್ತಾಬ್(ರ)ರಿಂದ ವರದಿ: ಅವರು ಹೇಳುತ್ತಾರೆ :ಅಲ್ಲಾಹನ ರಸೂಲ್(ರ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: “ಕರ್ಮಗಳು ಉದ್ದೇಶವನ್ನು (ನಿಯ್ಯತ್ತನ್ನು) ಅವಲಂಬಿಸಿಕೊಂಡಿವೆ. ಪ್ರತಿಯೊಬ್ಬ ವ್ಯಕ್ತಿಗೂ ಅವನ ಉದ್ದೇಶದ ಪ್ರಕಾರ ಮಾತ್ರ ಪ್ರತಿಫಲ ನೀಡಲಾಗುವುದು. ಆದ್ದರಿಂದ ಯಾರು ಅಲ್ಲಾಹನಿಗಾಗಿ ಮತ್ತು ಅವನ ರಸೂಲರಿಗಾಗಿ ದೇಶತ್ಯಾಗ ಮಾಡುತ್ತಾನೋ ಅವನ ದೇಶತ್ಯಾಗವು ಅಲ್ಲಾಹನಿಗೆ ಮತ್ತು ಅವನ ರಸೂಲರಿಗಾಗಿದೆ. ಆದರೆ ಯಾರ ದೇಶತ್ಯಾಗವು (ಹಿಜ್ರಃ) ಇಹಲೋಕಕ್ಕಾಗಿ, ಅದನ್ನು ಪಡೆಯಲು- ಅಥವಾ ಒಬ್ಬ ಮಹಿಳೆಗಾಗಿ, ಆಕೆಯನ್ನು ವಿವಾಹವಾಗಲು- ಆಗಿದೆಯೋ ಅವನ ದೇಶತ್ಯಾಗವು ಅವನು ಯಾವ ಉದ್ದೇಶಕ್ಕಾಗಿ ದೇಶತ್ಯಾಗ ಮಾಡಿದನೋ ಅದಕ್ಕಾಗಿದೆ”. 

[ಅಲ್ ಬುಖಾರಿ ಮತ್ತು ಮುಸ್ಲಿಮ್]

Related Posts

Leave A Comment

Voting Poll

Get Newsletter