ಧೀರ ಸ್ವಹಾಬಿ ಅಮ್ಮಾರ್‌ ಬಿನ್ ಯಾಸಿರ್
ಧೀರ ಸ್ವಹಾಬಿ ಅಮ್ಮಾರ್‌ ಬಿನ್ ಯಾಸಿರ್
ಯಾಸಿರ್ ಕುಟುಂಬವೇ ಕ್ಷಮೆಯಿರಲಿ .....ನಿಶ್ಚಯ ತಮಗೆ ಸ್ವರ್ಗ ಭರವಸೆಯಾಗಿದೆ. ( ಹದೀಸ್ )
                                                                     
ಸುಂದರವಾದ ದಿನ, ಅತಿ ಸುಂದರವಾದ ಹಗಲು .......
ಯಮನಿನಿಂದ ಒಂದು ಯಾತ್ರಾ ಸಂಘವು ಮಕ್ಕಾ ಬಂದು ತಲುಪಿತು. ಯಾಸಿರ್ ಬಿನ್ ಆಮಿರುಲ್ ಶಿನಾನಿ ಎಂಬವರು ಕಅಬದ ಹತ್ತಿರ ಇಣುಕಿ ನೋಡಿದರು. ಯಾಸಿರ್‌ (ರ) ರವರು ಮಕ್ಕಾಗೆ ಬೇರೆ ಯಾತ್ರಾ ಸಂಘದ ಹಾಗೆ ಮಾರಾಟಕ್ಕೆ ಬಂದಿದ್ದಲ್ಲ. ಅವರು ಮತ್ತು ಇಬ್ಬರು ಸಹೋದರರಾದ ಹಾರಿಸ್ ಮತ್ತು ಮಾಲಿಕ್ ಜೊತೆ ಕಾಣೆಯಾದ ತನ್ನ ಚಿಕ್ಕ ಸಹೋದರನನ್ನು ಹುಡುಕಲು ಆಗಿತ್ತು ಬಂದದ್ದು. ಅವರಿಗೆ ತಮ್ಮ ಸಹೋದರನನ್ನು ಹುಡುಕಲು ಸಾಧ್ಯವಾಗಲಿಲ್ಲ. ಈ ಮೂವರು ಎಲ್ಲಾ ಸ್ಥಳದಲ್ಲೂ ಹುಡುಕಿದರು. ಗ್ರಾಮಸ್ಥರಲ್ಲಿ ಕೇಳಿದರು. ಆದರೂ ಆತನ ಯಾವುದೇ ಸುಳಿವು ಲಭಿಸಲಿಲ್ಲ. ಹಾಗೆ ಅವರು ದುಖಿಃತರಾದರು. ಹಾರಿಸ್ ಮತ್ತು ಮಾಲಿಕ್ ರವರು ಬೇಸರದಿಂದ ಹಿಂತಿರುಗಿದರು. ಆದರೆ ಯಾಸಿರ್ (ರ) ರಿಗೆ ಮಕ್ಕವು ಆಕರ್ಷಕವಾಗಿದ್ದರಿಂದ ಅವರು ಮಕ್ಕಾದಲಲ್ಲೇ ತಂಗಿದರು.
ಅಲ್ಲಿ ಅವರಿಗೆ ಕುಟುಂಬಸ್ಥರೆಂದಲ್ಲ ತನಗೆ ಪರಿಚಯವಿರುವ ಯಾರೂ ಇರಲಿಲ್ಲ. ಮಕ್ಕಾದಲ್ಲಿ ವಾಸಿಸಬೇಕಾದರೆ ಯಾರಾದರೂ ಒಂದು ದೊಡ್ಡ ಕಬೀಲದ ನೇತಾರರ ಸಮ್ಮತವಿರಬೇಕು. ಆದ ಕಾರಣ ಈತನು ಮಕ್ಝೂಮಿ ಕಬೀಲಾದ ನೇತಾರರಾದ ಅಬು ಹುಝೈಫತ್ ಬಿನ್ ಮುಗೀರತುಲ್ ಮಖ್ಝೂಂ ರವರಲ್ಲಿ ಸಮ್ಮತಿ ಕೇಳಿದರು.
ಅಬೂ ಹುಝೈಫ ರವರು ಯಾಸಿರ್ ರವರ ಸೌಂದರ್ಯ ಮತ್ತು ಸ್ವಭಾವ ಗುಣವನ್ನು ಕಂಡು ಅವರನ್ನು ಇಷ್ಟಪಟ್ಟು ತನ್ನ ಗುಲಾಮರಾಗಿದ್ದ ಸುಮಯ್ಯ ಬಿನ್ ಖಿಬಾತ್ ರವರನ್ನು ಮದುವೆ ಮಾಡಿಕೊಟ್ಟರು. ಅವರಿಬ್ಬರಿಗೆ ಒಂದು ಮಗು ಜನಿಸಿತು. ಆ ಮಗುವಿಗೆ ಅವರು ಅಮ್ಮಾರ್‌ ಎಂದು ಕರೆದರು. 
ಹಾಗೆ ವರ್ಷಗಳು ಕಳೆದುಹೋಯಿತು. ಯಾಸಿರ್ ಮತ್ತು ಸುಮಯ್ಯರವರು ವೃದ್ಧೆಯಾದರು. ಅಮ್ಮಾರ್ ಯುವಕನೂ ಆದ, ಈ ವೇಳೆ ಅಲ್ಲಿಗೆ ಇಸ್ಲಾಮಿನ ಪ್ರಕಾಶ ಹರಡತೊಡಗಿತು. ಪ್ರವಾದಿಯವರು ಇಸ್ಲಾಮನ್ನು ಪರಿಚಯಿಸುತ್ತಿದ್ದರು. ಈ ಕಾರ್ಯವನ್ನು ತಿಳಿದ ಅಮ್ಮಾರ್ ರವರು ನೆಬಿ(ಸ) ರನ್ನು ಕಾಣಲು ಮಕ್ಕಾಗೆ ತಲುಪಿ ದಾರುಲ್ ಆರ್ಕಮ್ ಗೆ ಪ್ರವೇಶಿಸಿ ಅಲ್ಲಿ ಪ್ರವಾದಿಯವರ ಬಳಿ ಹೋಗಿ ಶಹಾದತ್ ಕಲಿಮ ಹೇಳಿ ಇಸ್ಲಾಂ ಸ್ವೀಕರಿಸಿದರು.
ಅಮ್ಮಾರ್ (ರ) ರು‌ ತನ್ನ ಮನೆಗೆ ತೆರಳಿ ಅಮ್ಮನ ಹತ್ತಿರ ಹೋಗಿ ಇಸ್ಲಾಮಿನ ಬಗ್ಗೆ ಪರಿಚಯಿಸಿದರು. ಆ ಸಮಯದಲ್ಲಿ ತಾಯಿ ಸುಮಯ್ಯರವರು ಇಸ್ಲಾಂ ಸ್ವೀಕರಿಸಿದರು. ನಂತರ ತಂದೆಯ ಬಳಿ ಹೋಗಿ ಇಸ್ಲಾಮಿನ ಅದೃಷ್ಟತೆ ಅಡಗಿದ ವಿಶೇಷತೆಗಳನ್ನು ವಿವರಿಸಿದರು. ತಂದೆಯಾದ ಯಾಸಿರ್ ರವರು ಸ್ವಲ್ಪ ಬಯಕೆಯಿಂದ ಇಸ್ಲಾಂ ಸ್ವೀಕರಿಸಿ ಈ ವಿಷಯವನ್ನು ಮುಚ್ಚಿಟ್ಟಿದ್ದರು.
ಇವರು ಇಸ್ಲಾಂ ಸ್ವೀಕರಿಸಿದ ವಿಷಯವನ್ನು ತಿಳಿದ ಮಝ್ಹೂಂ ಕಬಿಲಾ ಕುಪಿತಗೊಂಡರು. ಅವರನ್ನು ಎಳಿದೊಯ್ದು ಮರುಭೂಮಿಯಲ್ಲಿ ಕಬ್ಬಿಣದ ಮೇಲೆ ಮಲಗಿಸಿ ದಪ್ಪಗಿರುವ ಮರದ ಕಾಂಡವನ್ನು ಅವರ ಮುಖಕ್ಕೆ ಹಾಕಿ ಬೆತ್ತದಿಂದ ಥಳಿಸಿ ಅವರಿಗೆ ಸಹಿಸಲಾಗದಷ್ಟು ತೊಂದರೆ ಕೊಟ್ಟು ಸುಮಯ್ಯಾ ಬೀವಿಯವರ ಗುಪ್ತಾಂಗಕ್ಕೆ ಖಡ್ಗದಿಂದ ಚುಚ್ಚಿದ. ಕೊನೇಯುಸಿರೆಳೆಯುವ ವರೆಗೂ ಹಿಂಸಿಲ್ಪಟ್ಟ ಸುಮಯ್ಯ ಬೀವಿಯವರು ಇಸ್ಲಾಂ ಧರ್ಮದ ಮೊದಲ ರಕ್ತ ಸಾಕ್ಷಿಯಾದರು. ಅಮ್ಮಾರ್ (ರ) ರವರು ಪ್ರವಾದಿಯ ಬಳಿ ಬಂದು ಹೇಳಿದರು ನನಗೆ ದೊಡ್ಡ ತೊಂದರೆಯುಂಟಾಯಿತು ಪ್ರವಾದಿಯವರೇ.... ಏನು ತೊಂದರೆ ಎಂದು ಪ್ರವಾದಿ ಕೇಳಿದರು. ಆಗ ಅಮ್ಮಾರ್ ರವರು ನಡೆದ ಘಟನೆಗಳನ್ನು ಪ್ರವಾದಿಗೆ ವಿವರಿಸಿಕೊಟ್ಟರು. ಆಗ ಪ್ರವಾದಿಯವರು ಹೇಳುತ್ತಾರೆ: ನೀನು ಕ್ಷಮೆಯಿಂದ ಇರು. ನಿನ್ನ ಕುಟುಂಬಕ್ಕೆ ಸ್ವರ್ಗವಿದೆ.
ಪ್ರವಾದಿಯವರು ಹಿಜ್ರ ಹೋಗಲು ಸಮ್ಮತಿ ನೀಡಿದರು. ಅಮ್ಮಾರ್ (ರ) ಹಿಜ್ರಾ ಹೋದರು. ಬದ್ರ್ ಮತ್ತು ಯಮಾಮ ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿದರು.
ಪ್ರವಾದಿವರ್ಯರು ಮರಣ ಹೊಂದಿದರು. ಜನರೆಲ್ಲರೂ ಯಮಾಮ ಯುದ್ಧದಲ್ಲಿ ಒಟ್ಟುಗೂಡಿದ ಸಮಯ. ಆಗ ಪ್ರವಾದಿಯವರು ಮರಣ ಹೊಂದಿದ್ದನ್ನು ಕೇಳಿದ ಸ್ವಹಾಬಿಗಳಿಗೆ ದುಃಖವಾಯಿತು. ಹಾಗೆ ಯುದ್ಧವು ಶಕ್ತವಾಯಿತು ಮುಸ್ಲಿಂ ಸೈನ್ಯದಿಂದ ಸುಮಾರು ಜನರು ರಕ್ತಸಾಕ್ಷಿಗಳಾದರು. ಹಲವಾರು ಹಾಫಿಝ್ ಗಳು ಮರಣ ಹೊಂದಿದರು. ಇಸ್ಲಾಂ ಸೈನ್ಯ ಒಂದಿಷ್ಟು ಹಿಂದೆ ಸರಿದಿತ್ತು. ಆ ಸಮಯದಲ್ಲಿ ಅಮ್ಮಾರ್ (ರ)‌ ಬಂದು ಬಂಡೆಯ ಮೇಲೆ ಎದ್ದುನಿಂತರು, ಅವರ ಕಿವಿ ಮುರಿದಿತ್ತು. ಕಿವಿ ತಲೆಯಲ್ಲಿ ನೇತಾಡುತ್ತಿತ್ತು. 
“ ಓ ಜನರೇ ಸ್ವರ್ಗದಿಂದ ಓಡುತ್ತಿದ್ದೀರಾ ಬನ್ನಿರಿ ಒಟ್ಟಾಗಿ ನಮಗೆ ಸ್ವರ್ಗಕ್ಕೆ ಹೋಗೋಣ “
ಇದು ಕೇಳಿದ ಮುಸ್ಲಿಂ ಸೈನ್ಯವು ಶಕ್ತಗೊಂಡಿತು. ಹಾಗೆ ಕೊನೆಯಲ್ಲಿ ಮುಸೈಲಿಮತುಲ್ ಕಝಾಬ್ ವಧಿಸಲ್ಪಟ್ಟ. ಖಲೀಫ ಉಮರುಲ್ ಫಾರೂಕ್ (ರ) ರ ಸನ್ನಿದ್ಧಿಗೆ ತಲುಪಿದಾಗ ಅಮ್ಮಾರ್ (ರ) ರವರನ್ನು ಕೂಫಾದ ಗವರ್ನರ್ ಆಗಿ ಮಾಡಿದರು. ಮರಣದ ವರೆಗೆ ಇವರು ಗವರ್ನರ್ ಆಗಿದ್ದರು.

Related Posts

Leave A Comment

Voting Poll

Get Newsletter