ಹಜ್ಜ್ ಮತ್ತು ಬಲಿದಾನದ ಸಂಬಂಧ
ನಮಗೆಲ್ಲರಿಗೂ ತಿಳಿದಿರುವಂತೆ ಹಜ್ಜ್ ಮತ್ತು ಬಲಿದಾನ ಎಂಬುದು ಬಹಳ ಶ್ರೇಷ್ಠವಾದ ಕಾರ್ಯವಾಗಿದೆ, ಇವು ಪವಿತ್ರವಾದ ದುಲ್-ಹಿಜ್ಜಾ ತಿಂಗಳಲ್ಲಿ ಮಾತ್ರ ನೆರವೇರಿಸಲಾಗುತ್ತದೆ.ಇವುಗಳು ಏಕೆ 12 ನೆೇ ತಿಂಗಳು ಆಚರಿಸಲಾಗುತ್ತದೆ ಏತಕ್ಕಾಗಿ ಆಚರಿಸುವುದು ಇದರ ಮಹತ್ವವೇನು ಎಂಬುದನ್ನು ಕುರಿತು ತಿಳಿಯೋಣ....
ಇಸ್ಲಾಮಿನ ಕ್ಯಾಲೆಂಡರ್ ನಲ್ಲಿ ಕೊನೆಯ ತಿಂಗಳಾದ ಪವಿತ್ರವಾದ ದುಲ್ - ಹಿಜ್ಜಾ ತಿಂಗಳಲ್ಲಿ ಮಾತ್ರ ಪ್ರತ್ಯೇಕವಾಗಿ ಆಚರಿಸುವುದಾಗಿದೆ ಪವಿತ್ರ ಹಜ್ಜ್ ಮತ್ತು ಬಲಿದಾನ. ಪ್ರವಾದಿ ಇಬ್ರಾಹಿಂ ನೆಬಿ(ಅ.ಸ) ರವರ ಹಾಗು ಮಗ ಇಸ್ಮಾಯಿಲ್ (ಅ.ಸ) ರವರ ನೆನಪಿಗಾಗಿ ಪಾರಂಪರ್ಯವಾಗಿ ಆಚರಿಸಿಕೊಂಡು ಬರುವ ಬಹಳ ಮಹತ್ವವಾದ ಕಾರ್ಯವಾಗಿದೆ ಬಲಿದಾನ. ಪ್ರವಾದಿ ಇಬ್ರಾಹಿಂ(ಅ.ಸ) ರವರೊಂದಿಗೆ ಅಲ್ಲಾಹನು ತನ್ನ ಮಗನನ್ನು ಬಲಿ ಅರ್ಪಿಸಲು ಹೇಳಿದಾಗ ಹಿಂಜರಿಯದೆ ತನ್ನ ಮಗನ ಸಮ್ಮತದಿಂದ ಬಹಳ ಅಳಲುವಿಕೆಯಿಂದ ಬಲಿ ಅರ್ಪಿಸಲು ಹೋದಾಗ ಅವರ ಬಲಿಯನ್ನು ಅಲ್ಲಾಹನು ಸ್ವೀಕರಿಸಿ ನಂತರ ಕುರಿಯನ್ನು ಬದಲಾಗಿ ಅರ್ಪಿಸಲು ನಿರ್ದೇಶ ನೀಡಿದಿದ್ದುರಿಂದ ಪವಿತ್ರವಾದ ಆ ಕಾರ್ಯ ಇಂದಿಗೂ ಬಹಳ ಶ್ರೇಷ್ಠವಾಗಿ ಮುಸ್ಲಿಮರು ಆಚರಿಸುತ್ತಿದ್ದಾರೆ.
ಇನ್ನು ಪವಿತ್ರವಾದ ಹಜ್ಜನ್ನು ವಿಸ್ತರಿಸುವುದಾದರೆ ನಮ್ಮ ಆದ್ಯ ಪಿತಾಮಹ ಆದಂ ನೆಬಿ(ಅ.ಸ)ರವರು ನಿರ್ಮಿಸಿದ ಒಂದು ಆರಾಧನಾಲಯವಾಗಿದೆ. ಅದು ಪ್ರಳಯದಿಂದ ಧ್ವಂಸಗೊಂಡ ಕಾರಣ ಇಬ್ರಾಹಿಂ ನೆಬಿ ಹಾಗು ಆತನ ಮಗ ಇಸ್ಮಾಯಿಲ್ ನೆಬಿ ಸೇರಿ ಪುನರ್ನಿರ್ಮಿಸಿದ ಬಹಳ ಗೌರವವಿರುವ ಆರಾಧನಾಲಯವಾಗಿ ಕಿಯಾಮತ್ ದಿನ ತನಕ ಇರಬೇಕಾದ ಒಂದು ಸ್ಮಾರಕವಾಗಿದೆ ಕಅಬಾ ಷರೀಫ್ ಅದು ಎಲ್ಲ ಆರ್ಥಿಕವಾಗಿ ಮುಂದಿರುವ ಮುಸ್ಲಿಮರಿಗೆ ಕಡ್ಡಾಯವಾಗಿದೆ.ಅದನ್ನು ಈದುಲ್ ಅದ್ಹಾ ದಿನ ನಿರ್ವಹಿಸಬೇಕಾಗಿರುವುದು ಪವಿತ್ರವಿರುವ ಕಾರ್ಯವಾಗಿದೆ.
ಹಜ್ಜ್ ಮತ್ತು ಬಲಿದಾನದ ಮಹತ್ವಗಳು ನಮಗೆಲ್ಲರಿವುಗೂ ತಿಳಿದಿರುವ ವಿಷಯವಾಗಿದೆ. ಆದರೂ ಅದನ್ನು ಸಂಕ್ಷಿಪ್ತವಾಗಿ ವಿವರಿಸೋಣ; ಹಜ್ಜ್ ನಿರ್ವಹಿಸುವುದರಿಂದ ನಮ್ಮ ಎಲ್ಲ ಪಾಪಗಳಿಂದ ಅಲ್ಲಾಹನು ಶುದ್ದೀಕರಿಸುತ್ತಾನೆ. ಅಲ್ಲಾಹನು ಅಲ್ಲಿ ನೀಡುವ ಪ್ರತಿಫಲ ಬಹಳ ಅದ್ಭುತವಾಗಿದೆ. ಇನ್ನು ಸಾಮೂಹಿಕವಾಗಿ ನೋಡುವುದಾದರೆ ಹಜ್ಜ್ ನಿರ್ವಹಿಸಿದ ವ್ಯಕ್ತಿಗೆ ಜನರು 'ಹಾಜಿ' ಎಂಬ ನಾಮದಿಂದ ವಿಶೇಷಿಸುತ್ತಾರೆ. ಇದು ಅವರಿಗೆ ಬಹಳ ಹೆಮ್ಮೆಯ ವಿಚಾರವಾಗಿದೆ.
ಬಲಿದಾನ ಎಂಬುದು ಅದೊಂದು ಸಾಮೂಹಿಕವಾದ ಬಹಳ ಮಹತ್ವ ಹಾಗು ಪ್ರತಿಫಲ ಸಿಗುವ ಕಾರ್ಯವಾಗಿದೆ. ಆರ್ಥಿಕವಾಗಿ ಮುಂದಿರುವವರು ಮೃಗಗಳನ್ನು ಅಲ್ಲಾಹನಿಗೆ ಬಲಿ ಅರ್ಪಿಸುವುದರ ಜೊತೆಗೆ ಅದರ ಮಾಂಸವನ್ನು ಬಡವರಿಗೆ ಹಾಗು ಕುಟು೦ಬಕ್ಕೆ ಹಂಚಿಕೊಡುವುದರಿ೦ದ ಬಹಳ ಪ್ರತಿಫಲ ದೊರೆಯುತ್ತದೆ. ಇದು ಸಹ ಈದುಲ್- ಅದ್ಹಾ ದಿನದಂದು ಪ್ರತ್ಯೇಕವಾದ ಒಂದು ಕರ್ಮವಾಗಿದೆ.
ಹಜ್ಜ್ ಮತ್ತು ಬಲಿದಾನದ ಸಂಬಂಧವೆಂದರೆ ಅದನ್ನು ಸಂಕ್ಷಿಪ್ತವಾಗಿ ಬಣ್ಣಿಸುವುದಾದರೆ ಹಜ್ಜ್ ಎಂಬುವುದು ಅಲ್ಲಾಹನಿಗೆ ಮಾತ್ರ ಸಮರ್ಪಿಸುವ ಕಾರ್ಯವಾಗಿದೆ ಅದಕ್ಕೆ ಅಲ್ಲಾಹನು ತಕ್ಕದಾದ ಪ್ರತಿಫಲ ದೊರೆಯುತ್ತದೆ.
ಆದರೆ ಬಲಿದಾನವೆಂಬುದು ಸಾಮೂಹಿಕವಾದ ಒಂದು ರೀತಿಯ ಮನುಜರ ನಡುವಿನ ಸಾಹೋದರ್ಯತೆ, ಮಾನವೀಯತೆಯನ್ನು ಮೆರೆಯುವ ಕಾರ್ಯವಾಗಿದೆ.
ಆದ್ದರಿಂದ ಈ ಈದ್ ದಿನದಲ್ಲಿ ಪರಸ್ಪರ ಸಹೋದರರೊಂದಿಗೆ ಸಾಹೋದರ್ಯತೆಯನ್ನು ಸಾರುತ್ತ ಹಲವಾರು ಸತ್ಕರ್ಮಗಳು ಮಾಡಲು ಅಲ್ಲಾಹನು ತೌಫೀಕ್ ನೀಡಲಿ……