ಅರಫಾ ದಿನ-ಪ್ರವಾದಿ (ಸ) ರವರ ಶಾಶ್ವಿತ ಸಂದೆೇಶದ ಬೆಳಕು
ಅರಫಾ ದಿನ ಪ್ರವಾದಿ (ಸ) ರವರ ಸಂದೇಶದ ಬೆಳಕು
“ಅರಫಾ ದಿನವೇ ಹಜ್ಜ್” ಎಂದು ಪ್ರವಾದಿ ಹೇಳಿರುವ ಈ ಹದೀಸ್ .ಈ ಆದ್ಯತೆಯನ್ನು ಸ್ಪಷ್ಟಪಡಿಸುತ್ತದೆ. ಇದು ಕೇವಲ ಹಜ್ಜ್ ಯಾತ್ರೆಯ ಒಂದು ಭಾಗ ಮಾತ್ರವಲ್ಲ. ಮಾನವ ಕುಲದ ಇತಿಹಾಸದಲ್ಲಿ ನೈತಿಕ ಕ್ರಾಂತಿಯ ಬೆಳಕನ್ನು ಹರಡಿದ ಶಾಶ್ವತ ಸಂದೇಶಗಳ ದಿನವೂ ಆಗಿದೆ .ಅರಫಾ ದಿನವು ದುಲ್ ಹಿಜ್ಜಾ ತಿಂಗಳ ಒಂಬತ್ತನೇ ದಿನ, ಇದು ಹಜ್ಜಿನ ಪ್ರಮುಖ ಅಂಗ. ಈ ದಿನ ಹಜ್ಜಾಜುಗಳು ಮಕ್ಕಾ ನಗರದಿಂದ 20 ಕಿ.ಮೀ ದೂರವಿರುವ ಜಬಲ್ ಅಲ್-ರಹ್ಮಾ ಎಂಬ ಪರ್ವತದ ಬಳಿ ಇರುವ ಅರಫಾ ಮೈದಾನದಲ್ಲಿ ನೆರೆಯೂರುತ್ತಾರೆ.
ಇಲ್ಲಿ ತಂಗುವುದರೊಂದಿಗೆ ಧ್ಯಾನ, ತಪಸ್ಸು ,ಕ್ಷಮಾಪಣೆ ಹಾಗೂ ಪ್ರಾರ್ಥನೆಗಳ ಮೂಲಕ ಆತ್ಮ ಶುದ್ಧಿ ಉತ್ತುಂಗ ತಲುಪುವ ಪ್ರಯತ್ನ ನಡೆಯುತ್ತದೆ.
ಈ ದಿನದ ಪ್ರಾಮುಖ್ಯತೆಯ ಕುರಿತು ನೆಬಿ(ಸ) ರವರು ಹೇಳಿದರು:”ಅರಫಾ ದಿನದಲ್ಲಿ ಉಪವಾಸ ಹಿಡಿಯುವ ವ್ಯಕ್ತಿಯ ಹಿಂದಿನ ಮತ್ತು ನಂತರ ಬರುವ ವರ್ಷದ ಪಾಪಗಳನ್ನು ಅಲ್ಲಾಹನು ಕ್ಷಮಿಸುತ್ತಾನೆ.”(ಸ್ವಹೀಹುಲ್ ಮುಸ್ಲಿಂ).
ಖುತ್ಭತುಲ್ ವಿದಾ-ಮನುಕುದ ಸನ್ಮಾರ್ಗದ ದಾರಿದೀಪ
ಈ ದಿನದ ಮಹತ್ವವನ್ನು ಮತ್ತಷ್ಟು ಶ್ರೇಷ್ಠ ಗೊಳಿಸುವುದು ಪ್ರವಾದಿಯ ಖುತ್ಭತುಲ್ ವಿದಾ ಎಂಬ ಹೆಸರಿನಿಂದ ಖ್ಯಾತಿ ಪಡೆದ ಅಂತಿಮ ಉಪದೇಶ, ಇದು ಕೇವಲ ಭಾಷಣವಲ್ಲ. ಇಡೀ ಮಾನವೀಯತೆಯ ಕಾನೂನು ಸಂಹಿತೆಯ ಪ್ರಾರಂಭ.
1 ಮಾನವೀಯ ಸಮಾನತೆಯ ಘೋಷಣೆ
“ಓ ಜನತೆಯೇ ,ನಿಸ್ರಂದೇಹವಾಗಿ ನಿಮ್ಮ ಪ್ರಭು ಒಬ್ಬನೇ ನೀವೆಲ್ಲರೂ ಆದಂ ನೆಬಿ(ಅ.ಸ) ರವರ ಸಂತಾನ. ಆದಂ ನೆಬಿ(ಅ.ಸ) ರವರನ್ನು ಮಣ್ಣಿನಿಂದ ಸೃಷ್ಟಿಸಲ್ಪಟ್ಟರು. ಬಿಳಿಯವನಿಂದ ಕರೆಯನಿಗೆ, ಅರಬಿಗೆ ಅಜಮಿಯ್ಯಾ ಮೇಲೆ ಮೇಲುಗೈ ಇಲ್ಲ. ತಖ್ವವಿರುವವರೇ ಶ್ರೇಷ್ಠರು.”
“ ಇದು ಜಾತಿ, ಬಣ್ಣ, ಭಾಷೆ, ಪ್ರದೇಶವೆಲ್ಲಾ ವ್ಯತ್ಯಾಸಗಳನ್ನು ತಳ್ಳಿಹಾಕಿ , ತಖ್ವಾ ಅಲ್ಲಾಹನ ಭಯ ಮತ್ತು ಭಕ್ತಿಯ ಶ್ರೇಷ್ಠತೆಯನ್ನು ಮಾತ್ರ ಮಾನದಂಡವಾಗಿ ಘೋಷಿಸಿದರು. ಇದು ಆ ಕಾಲದಲ್ಲಿನ ಮಾನವ ಹಕ್ಕುಗಳ ಘೋಷಣೆಗೆ ಬೆನ್ನು ಹಾಕು ನೀಡಿದಂತದ್ದೇನಾಯಿತು.
2.ಆರ್ಥಿಕ ನ್ಯಾಯ ಮತ್ತು ಬಡ್ಡಿಯ ನಿರಾಕರಣೆ
“ ಜಾಹಿಲಿಯಾ ಕಾಲದ ಎಲ್ಲಾ ಬಡ್ಡಿಯ ವ್ಯವಹಾರಗಳನ್ನು ನಾನು ನನ್ನ ಕಾಲಡಿಯಲ್ಲಿ ಹಾಕಿದ್ದೇನೆ. ನನ್ನ ಕುಲದ ಬಡ್ಡಿಯು ನನಗೆ ಮಾನ್ಯವಲ್ಲ.”
ಈ ಹೇಳಿಕೆ ಬಡ್ಡಿ ಆಧಾರಿತ ಆರ್ಥಿಕ ವ್ಯವಸ್ಥೆಯ ವಿರುದ್ಧ ನೈತಿಕ ತಿರಸ್ಕಾರವಾಗಿದೆ. ಘೋಷಣೆಯ ಮೂಲವಾದ ಬಡ್ಡಿಯನ್ನು ನಿರಾಕರಿಸುವ ಮೂಲಕ ಇಸ್ಲಾಂ ಆರ್ಥಿಕ ಸಮಾನತೆ, ವಿತರಣಾ ನ್ಯಾಯ ಹಾಗೂ ಮಾನವೀಯ ವ್ಯವಹಾರದ ಪಥವನ್ನು ತೋರಿಸುತ್ತದೆ.
3.ಜೀವ ಮತ್ತು ಆಸ್ತಿಯ ಪವಿತ್ರತೆ
“ ನಿಮ್ಮ ರಕ್ತ, ಆಸ್ತಿ ಮತ್ತು ಗೌರವಗಳು- ಈ ದಿನ, ಈ ತಿಂಗಳು ಈ ನಗರವು ಎಷ್ಟು ಪವಿತ್ರವಾಗಿರುವಂತೆಯೇ ಪರಸ್ಪರ ಪವಿತ್ರವಾಗಿದೆ.”
ಇದು ವೈಯಕ್ತಿಕ ಮತ್ತು ಸಾಮಾಜಿಕ ನ್ಯಾಯದ ಘೋಷಣೆಯಾಗಿದೆ. ಎಲ್ಲರ ಜೀವ ಮತ್ತು ಆಸ್ತಿಯ ರಕ್ಷಿತವಾಗಬೇಕು ಎಂಬುದನ್ನು ಧಾರ್ಮಿಕ ಮಟ್ಟದಲ್ಲಿ ನಿಶ್ಚಿತಗೊಳಿಸಿತು .
4.ಖುರಾನ್ ಮತ್ತು ಹದೀಸ್ -ಶಾಶ್ವತ ದಾರಿದೀಪ
“ನಾನು ನಿಮ್ಮಲ್ಲಿ ಎರಡು ಸಂಗತಿಗಳನ್ನು ಬಿಟ್ಟು ಹೋಗುತ್ತಿದ್ದೇನೆ ಅಲ್ಲಿ ನೀವು ಅವುಗಳನ್ನು ಹಿಡಿದರೆ ಯಾವತ್ತೂ ದಾರಿಗೆ ತಪ್ಪಲ್ಲ ಅದು ಕುರಾನ್ ಮತ್ತು ನನ್ನ ಸುನ್ನತ್.”
ಅದು ಇಸ್ಲಾಮಿನ ಪರಿಪೂರ್ಣ ದಾರಿ ದೀಪ :ದೇವದೂತರ ಪರಂಪರೆ ಕೊನೆಗೊಂಡ ನಂತರವೂ ಧರ್ಮ ದಿಕ್ಕು ತಪ್ಪದಂತೆ ಇರುತ್ತದೆ ಎಂಬ ಭರವಸೆ.
ಈ ಯುಗದಲ್ಲಿ ಈ ಉಪದೇಶಗಳ ಪ್ರಸಕ್ತವೇನೆಂದರೆ ಇಂದು ಜಗತ್ತು ಅಸಮಾನತೆ, ಅಸಹಿಷ್ಣುತೆ ಅಕ್ರಮ ಮತ್ತು ಗಲಭೆಗಳಿಂದ ಕೂಡಿರುವಾಗ ಸಾವಿರದ ನಾನೂರುಗಳ ಮುಂದಿನ ಪ್ರವಾದಿಯ ಘೋಷಣೆಗಳು ಅಚ್ಚಳಿಯದಂತೆ ಶಾಶ್ವತ ಪರಿಹಾರದಂತೆ ನಿಂತಿದೆ. ಈ ದಿವಸದಲ್ಲೇ ಆಗಿತ್ತು ಪರಿಶುದ್ಧ ಧರ್ಮ ಇಸ್ಲಾಮಿನ ಪೂರ್ಣತೆ. ಇಸ್ಲಾಮಿನ ಒಳಸಂಗತಿಗಳನ್ನು ಅರ್ಥಿಸುತ್ತಾ, ಪರಿಪೂರ್ಣ ಮುಸಲ್ಮಾನನಾಗಿ ಜೀವಿಸೋಣ.