ಇಬ್ನ್ ಹಜರ್ ಅಲ್ ಹೈತಮಿ( ರ)

  ಹಿಜರಾ ಹತ್ತನೇ ಶತಮಾನದಲ್ಲಿ ಜೀವಿಸಿದ ವಿಶ್ವ ವಿಖ್ಯಾತ ಪಂಡಿತರಾಗಿದ್ದರು ಇಬ್ನ್ ಹಜರ್ ಅಲ್ ಹೈತಮಿ( ರ). ತನ್ನ ಧರ್ಮದ ನಂಬಿಕೆಗಳನ್ನು ತಾಳ್ಮೆಯಿಂದ ಶಾಫೀ ಕರ್ಮ ಶಾಸ್ತ್ರದ ಬೆಳವಣಿಗೆಯಲ್ಲಿ ಮಹತ್ತಾದ ಪಾತ್ರ ವಹಿಸಿಯು  ತನಗೆ ಸತ್ಯವೆಂದು ವ್ಯಕ್ತವಾದದ್ದನ್ನು ಜನರ ಎಡೆಯಲ್ಲಿ ಹೇಳಲು ದೈರ್ಯ ತೋರಿಸಿದರಿಂದ ವಿಶ್ವವಿಖ್ಯಾತರಾದರೂ.

ಪೂರ್ಣನಾಮ ಅಹ್ಮದ್ ಇಬ್ನ್ ಮುಹಮ್ಮದ್ ಇಬ್ನ್ ಮುಹಮ್ಮದ್ ಇಬ್ನ್ ಹಜರ್ ಅಲ್ ಹೈತಮಿ ಅಲ್ ಮಕ್ಕಿ ಎಂದಾಗಿದೆ.ಶಿಹಾಬಿದ್ದಿನ್ ಎನ್ನುವುದು ಅಪರ ನಾಮವು "ಹಜರ್" ಎಂಬಬುವುದು ತನ್ನ ಓರ್ವ ಪಿತಾಮಹನ ಹೆಸರಾಗಿದೆ . ಯಾವಾಗಲು ಮೌನಿಯಾದುದರಿಂದ ಈ ನಾಮದಿಂದ ಪ್ರಸಿದ್ಧರಾದರು. ಹಿಜಿರಾ 909 ರಲ್ಲಿ ಈಜಿಪ್ಟಿನ ಗರ್ಭಿಯ  ಗವರ್ನೈಟಿನ ಅಲ್ ಹೈಥಮ್  ಎಂಬ ಸಣ್ಣ ಗ್ರಾಮದಲ್ಲಿ ಜನಿಸಿದರು ಜನನ ವರ್ಷದಲ್ಲಿ ಬೇರೆಯೂ ಅಭಿಪ್ರಾಯಗಳು ಬಂದಿದೆ.ಹೈತಮ್ ಎನ್ನುವುದರಲ್ಲಿ ಎರಡನೇ ಅಕ್ಷರ ಅರೇಬಿಯಾ ಎರಡು ಚುಕ್ಕಿ ಇರುವ "ತ" ಎನ್ನುವುದಾಗಿದೆ ಪ್ರಭಲಾಭಿಪ್ರಾಯ.ಮೂರು ಚುಕ್ಕಿ ಇರುವ "ಥ" ಅದು ಯಾವುದು ಉಪಯೋಗಕ್ರಮದಲ್ಲಿ ತ ಆಗಿ ಬದಲಾವಣೆಯಾಗಿದ್ದು ತಾಜುಲ್ ಅರೂಸ್ ಎಂಬ ಗ್ರಂಥದಲ್ಲಿ ಕಾಣಬಹುದು.ಮಮ್ಲುಕ್ ರಾಜವಂಶ,ಉಸ್ಮಾನಿಯಾ ಖಿಲಾಫತ್ ಎಂಬುದಾಗಿದೆ ಇಮಾಮ್ ಅಭಿಮುಕಿಕರಿಸಿದ ರಾಷ್ಟ್ರೀಯ ಕಕ್ಷೆಗಳು.ಸೂಫಿ ಸಂಗೀತ ಸಬೆಗಳು.ಆಚಾರ ಸಭೆಗಳು ಮುಂತಾದವುಗಳಿಗೆ ಹೆಚ್ಚು ಪ್ರಚಾರ ಸಿಕ್ಕಿದ ಕಾಲವಾಗಿತ್ತು.ಈ ವಿಷಯಗಳೆಲ್ಲ ಇಮಾಮಿನ ಗ್ರಂಥದಲ್ಲಿ ವ್ಯಕ್ತಪಡಿಸಿದ್ದಾರೆ.ತಂದೆ ಸಣ್ಣದರಲ್ಲೆ ವಫಾತಾದರು.ಪಿತಾಮಹಣ ಶಿಕ್ಷಣದಲ್ಲಿ ಬೆಳೆದರು .ವಿಶುದ್ಧ ಕುರಾನ್ ಹಾಗೂ ಮಿನ್ಹಾಜಿನ ಕೆಲ ಭಾಗಗಳು ಕಲಿತರು.ಅವರ ಮರಣದ ನಂತರ ತಂದೆಯ ಶೈಖಾದ ಶಂಸುದ್ದಿನ್ ಅಸ್ಸನವಿ ಅವರ ಶಿಕ್ಷಣದಲ್ಲಿ ಬೆಳೆದರು.ತ್ವಂತ ಆಹ್ಮದುಲ್ ಬದವಿ ಮಸ್ಜಿದ್ ಹಾಗೂ ಕೈರೋದ ಜಾಮಿಯುಲ್ ಅಜ್ ಹರಿನಲ್ಲು ಪಠಣ ನಡೆಸಿದರು.

 

ಗುರುಗಳು:


ಇಮಾಮ್ ಸುಮಾರು ನಲವತ್ತು ಪ್ರಖ್ಯಾತ ಗುರುಗಳಿಂದ ಜ್ಞಾನವನ್ನು ಕಲಿತರು.  ಅವರಲ್ಲಿ   ಪ್ರಮುಖರು
1-ಶೈಖುಲ್ ಇಸ್ಲಾಂ ಝಕರಿಯಾಲ್ ಅನ್ಸಾರಿ (ರ).  ಮಹಾನ್ ವ್ಯಕ್ತಿಗಳು ಇಬ್ನ್ ಹಜರ್ (ರ) ಅವರ ಮುಖ್ಯ ಶಿಕ್ಷಕರು.ಶ್ರೇಷ್ಠರ ಕಾಲ 826-926.  ಕೈರೋದಲ್ಲಿ, ಅವರು ಇಮಾಮ್ ಶಾಫಿ (ರ) ಅವರೊಂದಿಗೆ ವಿಶ್ರಾಂತಿ ಪಡೆಯುತ್ತಾರೆ. 
2- ಅಬ್ದುಲ್ ಹಕ್ಕಿ ಬಿನ್ ಮುಹಮ್ಮದ್ ಅಸ್ಸುನ್ ಬಾತ್ವಿ(ರ). ಮಹಾನರ ಕಾಲ 842-931.  
3- ಶಂಸುದ್ದೀನ್ ದ್ದಲಜಿ (ರ).  ಅವರು ಅರೇಬಿಕ್ ಸಾಹಿತ್ಯವನ್ನು ಅಧ್ಯಯನ ಮಾಡಿದರು.  
4- ಅಬುಲ್ ಹಸನ್ ಅಲ್ ಬಕ್ರಿ (ರ).  952 ರಲ್ಲಿ ಮೃತರಾದರು
5 ಶಂಸುದ್ದೀನ್ ಅಲ್ ಹತ್ವಾಬಿ (ರ).902-954 ಮಹಾನರ ಕಾಲ.  ಅವರಿಂದಲೇ ಇಬ್ನ್ ಹಜರ್ (ರ) ನಹ್ವ್ ಮತ್ತು ಸ್ವರ್ಫ್ ಜ್ಞಾನವನ್ನು ಪಡೆದರು.

 

ಶಿಷ್ಯಂದಿರು:

ಮಹಾಪುರುಷನಿಗೆ ಅನೇಕ ಶಿಷ್ಯರಿದ್ದರು.  ಅವರಲ್ಲಿ ಪ್ರಮುಖರು
1- ಅಬ್ದುಲ್ ಖಾದಿರ್ ಅಲ್ ಫಖಿಹಿ (ರ).  ಅವರು ಫದೈಲು ಇಬ್ನ್ ಹಜರ್ ಎಂಬ ಗ್ರಂಥವನ್ನು ರಚಿಸಿದ್ದಾರೆ
2–ಅಬ್ದುರ್ ರೌಫ್ ಅಲ್ ವಾಯಿಲ್(ರ).
3–ಮುಹಮ್ಮದ್ ತ್ವಾಹಿರ್ ಅಲ್ ಹಿಂದಿ(ರ)ಮಜ್ಮಅ ಬಿಹಾರಿಲ್ ಅನ್ವರ್ ಎಂಬ ವಿಶುದ್ಧ ಗ್ರಂಥವನ್ನು ರಚಿಸಿದ ವ್ಯಕ್ತಿಯಾಗಿದ್ದಾರೆ.
4- ಅಹ್ಮದ್ ಇಬ್ನ್ ಖಾಸಿಮ್ ಅಲ್-ಅಬ್ಬಾದಿ (ರ).
5- ಎರಡನೆಯ ಜೈನುದ್ದೀನ್ ಮಕ್ದೂಮ್   ಅವರು ಶಾಫಿ ಕರ್ಮ ಶಾಸ್ತ್ರದ ಪ್ರಸಿದ್ಧ ಪುಸ್ತಕವಾದ ಫತುಹುಲ್-ಮುಈನಿನ  ಲೇಕಖಕರಾಗಿದ್ದಾರೆ. 

 

ಗ್ರಂಥಗಳು:


ಹಿಜಿರಾ 933 ರಲ್ಲಿ ಮಹಾನರು ಹಜ್ಜಿಗೆ ಹೋದರು.  ಆ ಸಮಯದಲ್ಲಿ ಪುಸ್ತಕ ಬರೆಯುವ ಆಲೋಚನೆ ಹುಟ್ಟಿಕೊಂಡಿದ್ದು.  ಆ ವಿಷಯದ ಬಗ್ಗೆ ಹಿಂಜರಿಕೆಯಲ್ಲಿರುವಾಗ ಪ್ರಸಿದ್ಧ ಸೂಫಿ ವರ್ಯರಾದ ಹರಿಸುಬ್ನು ಅಸದ್ ಅಲ್-ಮುಹಾಸಾಬಿ (ರ)ಅವರ   ಕನಸು ಕಂಡದ್ದು. ಅವರ ನಿರ್ದೇಶ ಪ್ರಕಾರ ಗ್ರಂಥಗಳನ್ನು  ರಚಿಸಲಾರಂಭಿಸಿದರು.  ಅವರು ಹದೀಸ್, ಫಿಕ್ಹ್, ಅಖೀದಾ, ಸ್ವಭಾವ ಸಂಸ್ಕೃತಿ, ನಹ್ವ್, ಪ್ರವಾದಿ ಇತಿಹಾಸ, ಇತಿಹಾಸದ ಕುರಿತು  117 ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ.  ಕೆಲವನ್ನು ಕೆಳಗೆ ಸೇರಿಸಲಾಗಿದೆ: 

 

ಹದೀಸ್ :


1- ಅಲ್-ಫತ್ ಅಲ್-ಮುಬೀನ್ ಫಿ ಶರ್ಹಿಲ್ ಅರ್ಬೈನ್ - ಇದು ಇಮಾಮ್ ನವಾವಿ (ರ)ಪ್ರಸಿದ್ಧ ಪುಸ್ತಕ ಅಲ್-ಅರ್ಬೈನ್‌ನ ವ್ಯಾಖ್ಯಾನವಾಗಿದೆ. 
2–ಅಷ್ರಫುಲ್ ವಸಾಯಿಲ್ ಇಲಾ ಫಹ್ಮಿಶಮಾಯಿಲ್–ಶಮಾಯಿಳುತ್ತುರ್ಮುಧಿಯ ವ್ಯಾಖ್ಯಾನ
3- ಫತುಲ್ ಇಲಾಹ್ ಬಿ ಶರ್ಹಿಲ್ ಮಿಶ್ಕಾತ್ - ಮಿಶ್ಕತುಲ್ ಮಸ್ವಾಬಿಹ್ ಕುರಿತು ವ್ಯಾಖ್ಯಾನ.  
4- ಅಲ್-ಫತಾವಾ ಅಲ್-ಹದಿಸಿಯಾ.  
5- ಅಲ್-ಇಫ್ ಸ್ವಾಹ್ ಅ ನ್ ಅಹದೀಸಿನ್ನಿಕಾಹ್.

 

ಫಿಕ್ಹ್:


1–ಅಲ್ ಇಮ್ದಾದ್ ಫೀ ಶರ್ಹಿಲ್ ಇರ್ಷಾದ್. 
2- ಫತುಲ್ ಜವಾದ್.  
3- ತುಹ್ಫತುಲ್ ಮುಹ್ತಾಜ್ ಬಿ ಶರ್ಹಿಲ್ ಮಿನ್ಹಾಜ್.ಶಾಫಿ ಕರ್ಮ ಶಾಸ್ತ್ರದ ಈ ಪ್ರಸಿದ್ಧ ಪುಸ್ತಕವನ್ನು ಹಿ.958 ರಲ್ಲಿ 49 ನೇ ವಯಸ್ಸಿನಲ್ಲಿ ಬರೆಯಲಾಗಿದೆ.  10 ಸಂಪುಟಗಲಿರುವ ಈ ಪುಸ್ತಕವನ್ನು 10 ತಿಂಗಳಲ್ಲಿ ಬರೆಯಲಾಗಿದೆ. ಹಿ.958 ಮೊಹರಂ 12 ರಂದು ಪ್ರಾರಂಭವಾಗಿ ಹಿ.958 ದುಲ್ ಖೈದಾ 27 ರಂದು ಕೊನೆಗೊಂಡಿತು.
4- ಅಲ್ ಇಯಾಬ್ ಫಿ ಶರ್ಹಿಲ್ ಉಬಾಬ್. ಇದು ಹಿ 930 ರಲ್ಲಿ ನಿಧನರಾದ ಖಾದಿ ಸ್ವಫಿವುದ್ದೀನ್ ಅಬ್ದುಲ್-ಅಹ್ಮದ್ ಇಬ್ನ್ ಉಮರಬಿ ಮುಹಮ್ಮದ್ ಅಲ್-ಮುಸಜ್ಜದ್ ಅವರ 'ಅಲ್-ಉಬಾಬ್' ಪುಸ್ತಕದ ವ್ಯಾಖ್ಯಾನವಾಗಿದೆ. 
5- ಶರ್ಹು ಬಾಫಧ್ಲ್.
6- ಅಲ್ ಫತಾವಲ್ ಕುಬ್ರಾ 2 

 

ನಂಬಿಕೆ ಮತ್ತು ಸ್ವಭಾವ ಸಂಸ್ಕೃತಿ :


1- ಅಸ್ಸವಾಜಿರ್ ಅ ನ್ ಇಖ್ತಿರಾಫಿಲ್ ಕಬೈರ್.  ಥೀಮ್ ದೊಡ್ಡ ಹಾನಿಯಾಗಿದೆ.  
2- ಅಲ್-ಇಲಾಮ್ ಬಿ ಕವಾಥ್ವಿಯಿಲ್ ಇಸ್ಲಾಂ 
3- ಕಫ್ಫುರಆ ಮುಹರ್ರಾಮತಿಲ್ಲಾಹ್ವಿ ವಸ್ಸಾಮಃ.  ಇದು ಮನರಂಜನೆಯ ಇಸ್ಲಾಮಿಕ್ ಆಯಾಮವನ್ನು ಚರ್ಚಿಸುತ್ತದೆ.  
4-  ಅಲ್-ಜವ್ಹರ್ ಅಲ್-ಮುನಲ್ಲಾಮ್ ಫೀ ಜಿಯಾರತಿಲ್ ಮುಕರ್ರಂ
5- ಅಸ್ವವಾಯಿಖುಲ್ ಮುಹಿರಿಕ.

 

ವೀಕ್ಷಣೆಗಳು:


ಅಹ್ಲುಸುನ್ನತ್ ವಲ್ ಜಮಾಅತ್ ನ ಅಭಿಪ್ರಾಯಗಳನ್ನು ವಿರೂಪಗಳಿಲ್ಲದೆ ಮಂಡಿಸಲು ಹಾಗೂ ವಿರೋಧಿಸುವವರನ್ನು ಪ್ರಬಲ ಭಾಷೆಯಲ್ಲಿ ವಿರೋಧಿಸಲು ಅವರು ರಂಗಕ್ಕೆ ಬಂದರು.  ಬಿದ್ಅತ್ ಆರಂಭಿಸಿದ ಇಬ್ನ್ ತೈಮಿಯಾ ಅವರನ್ನು ಅವರು ಬಲವಾಗಿ ವಿರೋಧಿಸಿದರು.  ತೌಹೀದ್, ಬಿದ್ಅತ್, ತವಸ್ಸುಲ್ , ಝಿಯಾರತ್ ಮುಂತಾದ ಅನೇಕ ವಿಷಯಗಳ ತಪ್ಪು ವ್ಯಾಖ್ಯಾನಗಳ ನಡುವೆ ಇರುವ ವ್ಯತ್ಯಾಸವನ್ನು ಗುರುತಿಸುವಲ್ಲಿ ಅವರ ಪುಸ್ತಕಗಳು ಅಮೂಲ್ಯವಾದ ಪಾತ್ರವನ್ನು ವಹಿಸಿವೆ.  ದೇವರು ನಮ್ಮನ್ನು ಅವರೊಂದಿಗೆ ಸ್ವರ್ಗಕ್ಕೆ ಕರೆದೊಯ್ಯಲಿ.

 

Related Posts

Leave A Comment

Voting Poll

Get Newsletter