ಚಿಕಿತ್ಸೆ ನಿಷೇಧಿಸುವ ಆದ್ಯಾತ್ಮಿಕ ಕ್ರೂರರು

sufi-santಇತ್ತೀಚೆಗೆ ನಾನು ಒಂದು ಉಸ್ತಾದರ ಉಗ್ರ ಭಾಷಣ ಕೇಳಿದೆ. ಕೇರಳದಲ್ಲಿ ಕಳ್ಳ ಅವುಲಿಯಾಗಳು ಎಂಬ ವಿಷಯಕ್ಕೆ ಸಂಬಂಧಿಸಿದಂತೆ, ನಡೆದ ಈ ಮತ ಪ್ರಭಾಷಣದ ಕ್ಯಾಸೆಟ್ ನೋಡಿ ನಾನು ಆಶ್ಚರ್ಯಗೊಂಡೆ. ಕೇರಳದಲ್ಲಿ ಪ್ರಚಾರದಲ್ಲಿರುವ ಹಲವಾರು ತಂಙಳ್‌ಗಳು, ಮಸ್ತಾನ್‌ಗಳನ್ನು ಪರದೆಯ ಮೇಲೆ ಪ್ರದರ್ಶಿಸಿ ಅವರನ್ನು ಹೀಯಾಳಿಸಿ ನಡೆದ ಭಾಷಣ ಕೇಳಿದರೆ ಯಾರೂ ಆಶ್ಚರ್ಯ ಪಡದೇ ಇರಲಾರರು. ಸುನ್ನೀ ಉಲಮಾಗಳು ಹೀಗೂ ಭಾಷಣ ಮಾಡುವುದುಂಟೇ? ಎಂದು ಬೆರಗುಗೊಂಡೆ. ಕಾರಣ ಈ ಭಾಷಣ ಮಾಡಿದ್ದು ನೂತನವಾದಿಯೇನೂ ಅಲ್ಲ. ಹೆಂಗಸರು ತಂಙಳ್‌ಗಳ ಕೈ ಚುಂಬಿಸುವ ದೃಷ್ಯದಿಂದ ಹಿಡಿದು ಹಲವು ಕೆಡುಕುಗಳನ್ನು ಸಿ.ಡಿಯಲ್ಲಿ ಬಾಷಣಗಾರರು ತೋರಿಸುತ್ತಾರೆ. ಸಂಗತಿ ಏನೇ ಇರಲಿ ನಾನು ಇಲ್ಲಿ ಹೇಳುವುದೇನೆಂದರೆ ಪ್ರಭುದ್ದ ಕೇರಳದಲ್ಲೇ ಇಷ್ಟೊಂದು ನಕಲಿ ಅವುಲಿಯಾಗಳು ಡೋಂಗಿ ತಂಙಳ್‌ಗಳು ಇರುವಾಗ ನಮ್ಮ ಕರ್ನಾಟಕದಲ್ಲಿ ಅದು ಎಷ್ಟು ಇರಬೇಡ? ಆದ್ಯಾತ್ಮಿಕತೆಯ ನೆಪದಲ್ಲಿ ಚಿಕಿತ್ಸೆ ನಿರಾಕರಿಸಿ ಹಲವರ ಸಾವಿಗೆ ಕಾರಣರಾದ ಕ್ರೂರರೂ ನಮ್ಮ ಕರ್ನಾಟಕದಲ್ಲಿ ಕಾರ್ಯಾಚರಿಸುತ್ತಿರುವಾಗ ಇಂತವರನ್ನೇಕೆ ಈ ಉಗ್ರ ಭಾಷಣಗಾರರು ವಿರೋಧಿಸುವುದಿಲ್ಲ.? ಹಲವು ಡೆಲಿವರಿ ಪ್ರಕರಣದಲ್ಲಿ ಮುಗ್ಧ ವಿಶ್ವಾಸಿಗಳು ಈ ತಂಙಳ್‌ಗಳಿಗೆ ಫೋನ್ ಮಾಡಿ ಡಾಕ್ಟರು ಆಪರೇಶನ್ ಬೇಕೆನ್ನುತ್ತಾರೆ. ಏನು ಮಾಡಲಿ ಎಂದು ಕೇಳುವಾಗ ಅತ್ತಕಡೆಯಿಂದ ಈ ತಂಙಳ್‌ಗಳು ಅದೇನೂ ಬೇಡ ಎನ್ನುತ್ತಾ ನೂರಾರು ಮಕ್ಕಳ ಮತ್ತು ತಾಯಿಗಳ ಸಾವಿಗೆ ಕಾರಣರಾಗಿದ್ದಾರಲ್ಲವೇ? ಈ ಪಿಡುಗು ಎಷ್ಟರವರೆಗೆ ಬೆಳೆದಿದೆ ಎಂದರೆ ಮಂಗಳೂರಿನ ಡಾಕ್ಟರ್‌ಗಳೆಡೆಯಲ್ಲಿ ಇದು ಇಂದು ವ್ಯಾಪಕ ಚರ್ಚೆಗೀಡಾಗಿದೆ. ಸೀರಿಯಸ್ ಪ್ರಕರಣಗಳು ಡಾಕ್ಟರ್‌ಗಳ ಹತ್ತಿರ ಬರುವಾಗ ಈ ಕ್ರೂರರ ಮಾತು ಕೇಳಿ ಮದ್ದು ಮಾಡದೆ ರೋಗಿಗಳು ಮರಣದ ದವಡೆಯಲ್ಲಿರುತ್ತಾರೆ. ಇದೊಂದು ಕ್ಷುಲ್ಲಕ ವಿಚಾರವೆಂದು ಸುಮ್ಮನಿದ್ದರೆ ನಾಳೆ ಈ ಪಿಡುಗು ನಮ್ಮ ಅಕ್ಕ ತಂಗಿಗಳನ್ನು ಬಲಿಕೊಡಬಹುದು. ರೋಗಿಗಳಿಗೆ ಚಿಕಿತ್ಸೆ ನಿರಾಕರಿಸುವಿದು ಇದು ಯಾವ ದೀನ್? ಸ್ವಂತ ಸಹೋದರಿಯನ್ನು ವಿವಾಹವಾದ ಒಬ್ಬ ಜಮಾಲುದ್ದೀನ್ ಅವುಲಿಯಾನನ್ನು ಕಟು ಶಬ್ಧಗಳಲ್ಲಿ ವಿರೋಧಿಸುವ ಈ ಬಾಷಣಗಾರನಿಗೆ ಸಹೋದರಿಯನ್ನು ವಿವಾಹವಗುವುದಕ್ಕಿಂತಲೂ ಜನರನ್ನು ಕೊಲ್ಲುವುದು ಮಹಾ ಪಾಪವೆಂದು ತಿಳಿದಿಲ್ಲವೇ? ಅನ್ಯ ಮಹಿಳೆಯರು ಕೈ ಚುಂಬಿಸುವ ಒಬ್ಬ ತಂಙಳ್‌ನ್ನು ವಿರೋಧಿಸುವ ಇವರು ಇತ್ತ ಕರ್ನಾಟಕಕ್ಕೆ ಬಂದರೆ ಅದೇ ಅನ್ಯ ಮಹಿಳೆಯರಿಂದ ಕೈ ಕಾಲು ಮಸಾಜ್ ಮಾಡಿಸುವ ತಂಙಳ್‌ಗಳನ್ನು ಹಾಡಿ ಹೊಗಳುತ್ತಾರಲ್ಲಾ? ಆದ್ದರಿಂದ ಕೇರಳದಲ್ಲಿ ಒಂದು ನೀತಿ, ಕರ್ನಾಟಕದಲ್ಲೊಂದು ನೀತಿ ನಿಲ್ಲಿಸಿ ಎಲ್ಲಾ ಕೆಡುಕುಗಳನ್ನು ವಿರೋಧಿಸಲು ಮುಂದೆ ಬಂದರೆ ಒಳ್ಳೆಯದು ಅಲ್ಲವೇ!

-ಕೆ.ಪಿ ಅಕ್ಬರಲಿ.ನಾಳ

Related Posts

Leave A Comment

Voting Poll

Get Newsletter