ಸಮಸ್ತವನ್ನು ರಾಜ್ಯಕೀಯ ವಿವಾದಕ್ಕೆ ಎಳೆಯದಿರಿ: ಸೈಯ್ಯದ್ ಜೀಫ್ರಿ ಮುತ್ತುಕೋಯ ತಂಙಲ್

ಸಮಸ್ತ ಕೇರಳ ಜಂಯ್ಯತುಲ್ ಉಲಮಾ 'ವನ್ನು ರಾಜಕೀಯ ವಿವಾದಕ್ಕೆ ಎಳೆಯಲು ಅನುಮತಿಸುವುದಿಲ್ಲ ಎಂದು ಸಮಸ್ತ ಕೇರಳ ಜಂಯ್ಯತುಲ್ ಉಲಮಾ ಅಧ್ಯಕ್ಷರಾದ ಸೈಯ್ಯದ್ ಜೀಫ್ರಿ ಮುತ್ತುಕೋಯ ತಂಙಲ್ ಪ್ರಸ್ತಾಪಿಸಿದರು.

ಸಮಸ್ತ ಧಾರ್ಮಿಕ ಸಂಘಟನೆಯಾಗಿದೆ, ರಾಜಕೀಯ ವಿಷಯಗಳಿಗೆ ಹಸ್ತಕ್ಷೇಪ ಮಾಡುವುದಿಲ್ಲ. ಹಲವು ರಾಜಕೀಯ ಪಕ್ಷದಲ್ಲಿ ಕಾರ್ಯನಿರ್ವಹಿಸುವರು ಸಮಸ್ತದಲ್ಲಿದ್ದಾರೆ. ಆದರೂ ಸಮಸ್ತದ ಹೆಸರನ್ನು ರಾಜಕೀಯ ವಿಚಾರಕ್ಕೆ ಸೇರಿಸಲು ಅನುಮತಿಸುವುದಿಲ್ಲ.

ಸಮಸ್ತದ ಬಗ್ಗೆ ಅಭಿಪ್ರಾಯ ತಿಳಿಸಲು ಯಾರನ್ನು ಕೂಡ ನೇಮಿಸಿಲ್ಲ. ಸಮಸ್ತದ ಪೂರ್ಣ ಅಧಿಕಾರ ಸಮಸ್ತ ಮುಶಾವರದ ಕೈಯಲ್ಲಾಗಿರುತ್ತದೆ. ಜನರ ಅಭಿಪ್ರಾಯಗಳು ಸಮಸ್ತದ ಅಭಿಪ್ರಾಯವಾಗುವುದಿಲ್ಲ. ಸಮಸ್ತದ ಅಭಿಪ್ರಾಯಗಳು, ನಿಯಮಾವಳಿಗಳನ್ನು ಅಧ್ಯಕ್ಷರು ಅಥವಾ ಜನರಲ್ ಸೆಕ್ರೆಟರಿ ರವರು ತಿಳಿಸುತ್ತಾರೆ. ಮಾಧ್ಯಮ ವರ್ಗದವರು ಅನಾವಶ್ಯಕವಾದ ವಿವಾದ ಎಳೆದು ಹಾಕಬಾರದು. ಜನರ ಅಭಿಪ್ರಾಯಗಳನ್ನು ಸಮಸ್ತದ ಅಭಿಪ್ರಾಯವೆಂದು ಪ್ರಕಟಿಸಬಾರದೆಂದು ಮಾಧ್ಯಮದವರೊಂದಿಗೆ ತಂಙಲ್ ರವರು ತಿಳಿಸಿದರು.

Related Posts

Leave A Comment

Voting Poll

Get Newsletter