ಮುಸ್ಲಿಂ ಇರುವಿಕೆಯ ಕುರಿತಾದ ಆರಂಭಿಕ ದಾಖಲೆಗಳು ಮತ್ತು ಚರ್ಚೆಗಳು
Mueen Hudawi Malayamma

ಮುಸ್ಲಿಂ ಇರುವಿಕೆಯ ಕುರಿತಾದ ಆರಂಭಿಕ ದಾಖಲೆಗಳು ಮತ್ತು ಚರ್ಚೆಗಳು


ಹಳೆಯ ಮಸೀದಿಗಳು ಮತ್ತು ಸ್ಮಶಾನಗಳ ಶಾಸನಗಳನ್ನು ವ್ಯವಸ್ಥಿತವಾಗಿ ಅಧ್ಯಯನ ಮಾಡಲು ಎಂ.ಜಿ.ಎಸ್. ಸಿದ್ದರಾಗಿದ್ದರೆ, ಏಳನೇ ಶತಮಾನದಷ್ಟು ಹಿಂದೆಯೇ ಕೇರಳಕ್ಕೆ ಇಸ್ಲಾಂ ಆಗಮಿಸಿದೆ ಎಂದು ಸ್ಪಷ್ಟವಾಗಿ ಸೂಚಿಸುವ ಹಲವಾರು ದಾಖಲೆಗಳನ್ನು ಅವರು ಎದುರಿಸುತ್ತಿದ್ದರು. ಹಿಜರಿ ಶಕೆಯ ಮೊದಲ ಶತಮಾನವನ್ನು ಉಲ್ಲೇಖಿಸುವ ಹಲವಾರು ಶಾಸನಗಳು ರಾಜ್ಯದ ವಿವಿಧ ಭಾಗಗಳಲ್ಲಿ, ಉದಾಹರಣೆಗೆ ಕಾಸರಗೋಡು, ಶ್ರೀಕಂಠಪುರಂ ಮತ್ತು ಇರಿಕ್ಕೂರ್ ನಿಲಂಪರಂಬ ಮುಂತಾದೆಡೆ ಮಸೀದಿ ಗೋಡೆಗಳು ಮತ್ತು ಸಮಾಧಿ ಕಲ್ಲುಗಳ ಮೇಲೆ ಇನ್ನೂ ಸಂರಕ್ಷಿಸಲ್ಪಟ್ಟಿವೆ. ಇವುಗಳನ್ನು ಗಣನೆಗೆ ತೆಗೆದುಕೊಳ್ಳುವ ಬದಲು. ಇತಿಹಾಸವನ್ನು ತಮ್ಮದೇ ಆದ ವಾದಕ್ಕೆ ತಕ್ಕಂತೆ 'ಪಳಗಿಸಲು' ಅವರು ಲೋಗನ್ ಉಲ್ಲೇಖಿಸಿದ್ದಾರೆ ಎನ್ನಲಾದ ಮಾಡಾಯಿಹಳ್ಳಿಗೆ ಸಂಬಂಧಿಸಿದ ವಿವಾದಾತ್ಮಕ ದಿನಾಂಕ ವನ್ನು ಮಾತ್ರ ಎತ್ತಿ ತೋರಿಸಲು ಆಯ್ಕೆ ಮಾಡುತ್ತಾರೆ.

-ಡಾ. ಮುಈನ್ ಹುದವಿ ಮಲಯಮ್ಮ ಖ್ಯಾತ ಬರಹಗಾರ, ಇತಿಹಾಸಗಾರ


ಹಿಜರಿ (Hijra) ಶಕೆಯ ಮೊದಲ ಶತಮಾನದಷ್ಟು  ಹಿಂದೆಯೇ ಕೇರಳದಲ್ಲಿ ಮುಸ್ಲಿಂ ನೆಲೆಗಳು ಇದ್ದವು ಎಂಬುದನ್ನು ಐತಿಹಾಸಿಕ ಸಾಕ್ಷ್ಯಗಳ ಗಣನೀಯ ಸಂಗ್ರಹವು ದೃಢೀಕರಿಸುತ್ತದೆ. ಮಾಡಾಯಿಪಳ್ಳಿ ಮಸೀದಿ ಯ ಶಾಸನಗಳು, ತರಿಸಾಪ್ಪಳ್ಳಿ ತಾಮ್ರಶಾಸನಗಳಲ್ಲಿ ಕಂಡುಬರುವ ಮುಸ್ಲಿಂ ಹೆಸರುಗಳು, ಅರಕ್ಕಲ್ ರಾಜವಂಶದಉಗಮಕ್ಕೆ ಸಂಬಂಧಿಸಿದಸಂಪ್ರದಾಯಗಳು, ಆರಂಭಿಕ ಅರಬ್-ಪರ್ಷಿಯನ್ ಪ್ರವಾಸ ಕಥನಗಳು, ಪ್ರಾಚೀನ ಮಸೀದಿಗಳು, ಸಮಾಧಿ ಕಲ್ಲುಗಳು (Tombstones), ನಾಣ್ಯಗಳು ಮತ್ತು ಉತ್ಪನನಗಳಲ್ಲಿ ಪತ್ತೆಯಾದ ಕಲಾಕೃತಿಗಳು ಈ ಸಾಕ್ಷ್ಯಗಳ ವರ್ಗಕ್ಕೆ ಸೇರುತ್ತವೆ. ಈ ಆಕರಗಳನ್ನು ಮುಂದಿನ ವಿಭಾಗಗಳಲ್ಲಿ ವಿವರವಾಗಿ ಚರ್ಚಿಸಲಾಗುವುದು.
ಆದರೆ, ಅಕಾಡೆಮಿಕ್ ವಲಯವಾಗಲಿ ಅಥವಾ ಪುರಾತತ್ವ ಇಲಾಖೆಯಾಗಲಿ (Archaeological Department) ಈ ಸಾಮಗ್ರಿಗಳನ್ನು ಆಧರಿಸಿ ನಿರಂತರ ಮತ್ತು ಗಂಭೀರ ಸಂಶೋಧನೆಯನ್ನು ಕೈಗೊಂಡಿಲ್ಲ ಎಂಬುದು ಸತ್ಯ. ಈ ವಿಷಯದಲ್ಲಿ 'ಸಂಶೋಧನೆ' ಎಂದು
ಕೊಂಡಾಡಲ್ಪಡುವ ಅನೇಕ ಅಧ್ಯಯನಗಳು ವಾಸ್ತವವಾಗಿ ನಿಖರ ವಿಧಾನಕ್ಕಿಂತ ಹೆಚ್ಚಾಗಿ ಪೂರ್ವಾಗ್ರಹ, ಪೂರ್ವಾ ಲೋಚನೆಗಳು ಮತ್ತು ಕಲ್ಪನೆಗಳಿಂದ ರೂಪಿಸ ಲ್ಪಟ್ಟಿವೆ. ಪರಿಣಾಮವಾಗಿ, ಸತ್ಯಗಳನ್ನು ಅನೇಕ ವೇಳೆ ಮರೆಮಾಚಲಾಗಿದೆ ಮತ್ತು ನಿರ್ದಿಷ್ಟ ವಿದ್ವಾಂಸರ 'ಮಾನಸಿಕ ಕಲ್ಪನೆಗಳನ್ನು' ಇತಿಹಾಸವಾಗಿ ಬಿಂಬಿಸ ಲಾಗಿದೆ. ಇದು ಕೇರಳಕ್ಕೆ ಇಸ್ಲಾಂ ಧರ್ಮದ ಆಗಮನದ ನಿರೂಪಣೆಯನ್ನು ಗಮನಾರ್ಹವಾಗಿ ವಿರೂಪಗೊಳಿಸಿದೆ. ಕೇರಳದಲ್ಲಿ ಮುಸ್ಲಿಂ ಇರುವಿಕೆಯ ಆರಂಭಿಕ ದಾಖಲೆ ಗಳನ್ನು ಓದುವಲ್ಲಿ ನುಸುಳಿರುವ ಪ್ರಮುಖ ದೋಷಗ ಳನ್ನು ಗುರುತಿಸುವುದು ಮತ್ತು ಅಂತಹ ದಾಖಲೆಗಳನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎಂಬುದರ ಕುರಿತು ಚಿಂತಿ ಸುವುದು ಈ ಅಧ್ಯಾಯದ ಉದ್ದೇಶವಾಗಿದೆ.

ಮಾಡಾಯಿಪಳ್ಳಿ ಶಾಸನಗಳು: ವಾಸ್ತವ ಸಂಗತಿಗಳು
ಎರಡನೇ ಚೇರ ಸಾಮ್ರಾಜ್ಯದ ಕೊನೆಯ ಆಡಳಿತಗಾರ ರಾಮವರ್ಮ ಕುಲಶೇಖರ ಎಂದು ಸಾಬೀತುಪಡಿಸುವ ತಮ್ಮ ಊಹೆಯನ್ನು ಬೆಂಬಲಿಸಲು ಎಂ.ಜಿ.ಎಸ್. ನಾರಾಯಣನ್ ಅವರು ಸೃಷ್ಟಿಸಿದ ಕಥೆಗಳಲ್ಲಿ ಒಂದು ಮಾಡಾಯಿ ಮಸೀದಿಯ (ಮಾಡಾಯಿಪಳ್ಳಿ) ದಿನಾಂಕಕ್ಕೆ ಸಂಬಂಧಿಸಿದೆ. ಈ ಮಸೀದಿಯನ್ನು ಕ್ರಿ.ಶ. 1124 ರಲ್ಲಿ ನಿರ್ಮಿಸಲಾಯಿತು ಎಂದು ಅವರು ಪ್ರತಿಪಾದಿಸುತ್ತಾರೆ. ಅವರ ಪುನರ್ನಿಮರ್ಾಣದ ಪ್ರಕಾರ, ರಾಮವರ್ಮ ಕುಲಶೇಖರನು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಕ್ರಿ.ಶ. 1122 ರಲ್ಲಿ ಮೆಕ್ಕಾಕ್ಕೆ ತೆರಳಿದನು ಮತ್ತು ಎರಡು ವರ್ಷಗಳ ನಂತರ ಅವನ ಅನುಯಾಯಿಗಳು ಕೇರಳಕ್ಕೆ ಮರಳಿ ಬಂದು ಮಸೀದಿಯನ್ನು ನಿರ್ಮಿಸಿದರು. ಈ ದಿನಾಂಕವನ್ನು ಅವರು ಮಾಲಿಕ್ ಬಿನ್ ದೀನಾರ್ ಮತ್ತು ಅವರ ಸಂಗಡಿಗರ ಆಗಮನದೊಂದಿಗೂ ತಳುಕು ಹಾಕುತ್ತಾರೆ ಮತ್ತು ಅವರು ಕೂಡ ಈ ಅವಧಿಯಲ್ಲಿಯೇ ಕೇರಳವನ್ನು ತಲುಪಿದರು ಎಂದು ಹೇಳುತ್ತಾರೆ. ಈ ಆಧಾರದ ಮೇಲೆ ಮಾಡಾಯಿಪಳ್ಳಿಯು ಕೇರಳದ ಮೊದಲ ಮಸೀದಿ ಎಂದು ಅವರು ವಾದಿಸುತ್ತಾರೆ (1).
ಊಹೆಗಳನ್ನು ಇತರ ಊಹೆಗಳಿಗೆ ಸಾಕ್ಷ್ಯಾಧಾರವಾಗಿ ಪ್ರಸ್ತುತಪಡಿಸುವ ವಿಚಿತ್ರ ದೃಶ್ಯವನ್ನು ನಾವಿಲ್ಲಿ ಕಾಣುತ್ತೇವೆ. ತಮ್ಮ ಅನಿಸಿಕೆಯ ಪೂರ್ವಗ್ರಹಪೀಡಿತ ಕಾಲ್ಪನಿಕ ಚಿತ್ರಣಕ್ಕೆ ಹೊಂದಿಕೆಯಾಗುವಂತೆ ಇತಿಹಾಸವನ್ನು ತಿರುಚುವ ಪ್ರಕ್ರಿಯೆಯಾಗಿದೆ ಇಲ್ಲಿ ಕಾಣುವುದು. 'ದಾಖಲೆಗಳ ಆಧಾರದಲ್ಲಿ' ಎಂದು ವಾದಿಸುತ್ತಾ ಎಂ.ಜಿ.ಎಸ್.ಅವರು ಮಾಡಾಯಿಪಳ್ಳಿಯ ನಿರ್ಮಾಣ ಮತ್ತು ಮಾಲಿಕ್ ಬಿನ್ ದೀನಾರ್ ಅವರ ಗುಂಪಿನ ಆಗಮನ ಎರಡನ್ನೂ
ಹನ್ನೆರಡನೆಯ ಶತಮಾನಕ್ಕೆ ತಳ್ಳಲು ಪ್ರಯತ್ನಿಸುತ್ತಾರೆ. ಅವರು ಉಲ್ಲೇಖಿಸುವ ಏಕೈಕ 'ಸಾಕ್ಷ್ಯ'ವೆಂದರೆ, ವಿಲಿಯಂ ಲೋಗನ್ (William Logan) ಅವರ ಕಾಲದಲ್ಲಿ ಮಸೀದಿಯಲ್ಲಿ ಒಂದು ಶಾಸನವಿತ್ತು, ಅದು ಅದರ ನಿರ್ಮಾಣದ ದಿನಾಂಕವನ್ನು 1124 ಎಂದು ದಾಖಲಿಸಿತ್ತು ಮತ್ತು ಪುರಾತತ್ವ ಇಲಾಖೆಯು 1929 ರಲ್ಲಿ ಈ ಶಾಸನವನ್ನು ನಕಲು ಮಾಡಿತ್ತು ಎಂಬ ಕಥೆ.
ಆದರೆ, ಲೋಗನ್ ಅವರ ದಾಖಲೆಗಳಲ್ಲಿ ಮಾಡಾಯಿ ಪಳ್ಳಿಯ ಬಗ್ಗೆ ಅಂತಹ ಯಾವುದೇ ಉಲ್ಲೇಖವಿಲ್ಲ, ಅಥವಾ ಪುರಾತತ್ವ ಇಲಾಖೆಯು ಅಂತಹ ಯಾವುದೇ ಶಾಸನವನ್ನು ಸಂಗ್ರಹಿಸಿಲ್ಲ ಎಂದು ಡಾ. ಸಿ.ಕೆ. ಕರೀಂ ಅವರು ಸ್ಪಷ್ಟವಾಗಿ ಹೇಳುತ್ತಾರೆ. ಕೇರಳದಾದ್ಯಂತ ಪ್ರಾಚೀನ ಮಸೀದಿಗಳು ಮತ್ತು ಸಮಾಧಿ ಕಲ್ಲುಗಳ ಮೇಲೆ ಕೆತ್ತಲಾದ ನೂರಾರು ಅಮೂಲ್ಯ ಶಾಸನಗಳ ಒಂದು ಸಣ್ಣ ಭಾಗವನ್ನೂ ಇಲಾಖೆಯು ಇನ್ನೂ ನಕಲಿಸದ ಅಥವಾ ಪ್ರಕಟಿಸದ ಸಮಯದಲ್ಲಿ, ಅವರು ಈ ಒಂದೇ ಶಾಸನವನ್ನು ನಕಲಿಸಿದ್ದಾರೆ ಎಂಬ ಹೇಳಿಕೆಯು ಶುದ್ಧ ಸುಳ್ಳು ಎಂದು ಅವರು ಬರೆಯುತ್ತಾರೆ. ಅಂತಹ ದಾಖಲೆಯನ್ನು ಸಂಗ್ರಹಿ ಸಿದ್ದರೆ, ಅದು ಇಲಾಖೆಯ ಬುಲೆಟಿನ್‌ಗಳಲ್ಲಿ ಅಥವಾ ಇತರ ಪ್ರಕಟಣೆಗಳಲ್ಲಿ ಖಂಡಿತವಾಗಿಯೂ ಕಂಡು ಬರುತ್ತಿತ್ತು ಎಂದು ಅವರು ವಾದಿಸುತ್ತಾರೆ. ಮುಸ್ಲಿಂ ಇತಿಹಾಸಕ್ಕೆ ಸಂಬಂಧಿಸಿ ಸೃಷ್ಟಿಸಲಾದ ಕಟ್ಟುಕಥೆಗಳನ್ನು ಪ್ರಶ್ನಿಸುವ ವಿದ್ವಾಂಸರು ಮುಸ್ಲಿಮರಲ್ಲಿ ಕಡಿಮೆ ಇರುವು ದರಿಂದ, ಬರಹಗಾರರು ತಮಗೆ ಇಷ್ಟಬಂದದ್ದನ್ನು ಬರೆದಿದ್ದಾರೆ(2). ಕರೀಂ ಅವರ ಪ್ರಕಾರ, ಮಾಡಾಯಿ ಪಳ್ಳಿಯ ವಿಷಯದಲ್ಲಿ ಎಂ.ಜಿ.ಎಸ್. ಮಾಡಿರುವುದು ಇದನ್ನೇ.
ವಾಸ್ತವದಲ್ಲಿ, ಏಝ ಲದ ಸಮೀಪವಿರುವ ಮಾಡಾಯಿ ಪಳ್ಳಿಯು, 21 ನೇ ಹಿಜರಿ ವರ್ಷದಲ್ಲಿ ಮಾಲಿಕ್ ಬಿನ್ ದೀನಾರ್ ಮತ್ತು ಅವರ ಸಂಗಡಿಗರು ಕೇರಳದಾದ್ಯಂತ ನಿರ್ಮಿಸಿದ ಹತ್ತು ಮಸೀದಿಗಳಲ್ಲಿ ಒಂದಾಗಿದೆ. ಮಾಡಾಯಿಪಳ್ಳಿಯ ಮೊದಲ ಖಾಝಿ (Qazi) ಅಬ್ದುಲ್ ರಹಮಾನ್ ಬಿನ್ ಮಾಲಿಕ್ ಆಗಿದ್ದರು (3). ಸಹಜವಾಗಿಯೇ, ಮಸೀದಿಯು ವಿವಿಧ ಸಮಯ ಗಳಲ್ಲಿ ದುರಸ್ತಿ ಮತ್ತು ವಿಸ್ತರಣೆಗಳಿಗೆ ಒಳಗಾಗಿರಬಹುದು. ಕ್ರಿ.ಶ. 1124ಕ್ಕೆ ಅನುಗುಣವಾದ ದಿನಾಂಕವು ಅಲ್ಲಿ ಕೆತ್ತಲ್ಪಟ್ಟಿದ್ದರೂ ಸಹ, ಅದು ಅಂತಹ ನವೀಕರಣವನ್ನು ಸೂಚಿಸುತ್ತದೆಯೇ ಹೊರತು ಮಸೀದಿಯ ಮೂಲ ಸ್ಥಾಪನೆಯನ್ನಲ್ಲ. ಅದಕ್ಕಿಂತ ಮೊದಲು ಅಲ್ಲಿ ಯಾವುದೇ ಮಸೀದಿ ಇರಲಿಲ್ಲ ಎಂದು ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲ.
ಹಳೆಯ ಮಸೀದಿಗಳು ಮತ್ತು ಸ್ಮಶಾನಗಳ ಶಾಸನಗಳನ್ನು ವ್ಯವಸ್ಥಿತವಾಗಿ ಅಧ್ಯಯನ ಮಾಡಲು ಎಂ.ಜಿ.ಎಸ್. ಸಿದ್ದರಾಗಿದ್ದರೆ, ಏಳನೇ ಶತಮಾನದಷ್ಟು ಹಿಂದೆಯೇ ಕೇರಳಕ್ಕೆ ಇಸ್ಲಾಂ ಆಗಮಿಸಿದೆ ಎಂದು ಸ್ಪಷ್ಟವಾಗಿ ಸೂಚಿಸುವ ಹಲವಾರು ದಾಖಲೆಗಳನ್ನು ಅವರು ಎದುರಿಸುತ್ತಿದ್ದರು. ಹಿಜರಿ ಶಕೆಯ ಮೊದಲ ಶತಮಾನ ವನ್ನು ಉಲ್ಲೇಖಿಸುವ ಹಲವಾರು ಶಾಸನಗಳು ರಾಜ್ಯದ ವಿವಿಧ ಭಾಗಗಳಲ್ಲಿ, ಉದಾಹರಣೆಗೆ ಕಾಸರಗೋಡು, ಶ್ರೀಕಂಠಪುರಂ ಮತ್ತು ಇರಿಕ್ಕೂರ್ ನಿಲಂಪರಂಬ ಮುಂತಾದೆಡೆ ಮಸೀದಿ ಗೋಡೆಗಳು ಮತ್ತು ಸಮಾಧಿ ಕಲ್ಲುಗಳ ಮೇಲೆ ಇನ್ನೂ ಸಂರಕ್ಷಿಸಲ್ಪಟ್ಟಿವೆ. ಇವುಗಳನ್ನು ಗಣನೆಗೆ ತೆಗೆದುಕೊಳ್ಳುವ ಬದಲು, ಇತಿಹಾಸವನ್ನು ತಮ್ಮದೇ ಆದ ವಾದಕ್ಕೆ ತಕ್ಕಂತೆ 'ಪಳಗಿಸಲು' ಅವರು ಲೋಗನ್ ಉಲ್ಲೇಖಿಸಿದ್ದಾರೆ ಎನ್ನಲಾದ ಮಾಡಾಯಿಪಳ್ಳಿಗೆ ಸಂಬಂಧಿಸಿದ ವಿವಾದಾತ್ಮಕ ದಿನಾಂಕವನ್ನು ಮಾತ್ರ ಎತ್ತಿ ತೋರಿಸಲು ಆಯ್ಕೆ ಮಾಡುತ್ತಾರೆ.

Related Posts

Leave A Comment

Voting Poll

Get Newsletter